ಕರ್ನಾಟಕ

karnataka

ETV Bharat / state

ತಾಕತ್ತಿದ್ದಾರೆ ಎಲ್ಲಾ ಜಯಂತಿ ರದ್ದು ಮಾಡಲಿ: ವಾಟಾಳ್​ ಸವಾಲು - ಸಿಎಂ ಬಗ್ಗೆ ವಾಟಾಳ್​ ನಾಗರಾಜ್‌ ಹೇಳಿಕೆ

ರಾಜ್ಯ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿರುವ ಹಿನ್ನೆಲೆ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿದರು.

ಯಡಿಯೂರಪ್ಪರಿಗೆ ತಾಕತ್ತಿದ್ದಾರೆ ಎಲ್ಲಾ ಜಯಂತಿ ರದ್ದು ಮಾಡಲಿ: ವಾಟಾಳ್​ ನಾಗರಾಜ್‌

By

Published : Nov 11, 2019, 3:34 PM IST

ಮೈಸೂರು:ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ರಾಜ್ಯದ ಎಲ್ಲಾ ಜಯಂತಿಗಳನ್ನು ರದ್ದು ಮಾಡಲಿ ಎಂದು ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ಸವಾಲು ಹಾಕಿದರು.

ಯಡಿಯೂರಪ್ಪರಿಗೆ ತಾಕತ್ತಿದ್ದಾರೆ ಎಲ್ಲಾ ಜಯಂತಿ ರದ್ದು ಮಾಡಲಿ: ವಾಟಾಳ್​ ನಾಗರಾಜ್‌

ರಾಜ್ಯ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿರುವ ಹಿನ್ನೆಲೆ ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್​, ಯಾರನ್ನು ಕೇಳಿ ಯಡಿಯೂರಪ್ಪ ಅವರು ಟಿಪ್ಪು ಜಯಂತಿಯನ್ನು ರದ್ದು ಮಾಡಿದರು. ರದ್ದು ಮಾಡುವ ಮುನ್ನ ಸಭೆ ಕರೆದು ಇದರ ಬಗ್ಗೆ ಚರ್ಚೆ ನಡೆಸಬೇಕು. ಅಲ್ಲದೇ, ಈಗ ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆಯಲು ಮುಂದಾಗಿರುವ ಧೋರಣೆ ಕೈಬಿಡಬೇಕು ಎಂದು ಆಗ್ರಹಿಸಿದರು.

ಅನರ್ಹ‌ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಜನರು ಅವರಿಗೆ ತಕ್ಕ ಪಾಠ ಕಲಿಸಬೇಕು. ಮಹಾರಾಷ್ಟ್ರದಲ್ಲಿ ಪಕ್ಷದಿಂದ ಪಕ್ಷಕ್ಕೆ ಜಂಪ್ ಆಗಿ ಚುನಾವಣೆಯಲ್ಲಿ ಸೋತಂತೆ ನಮ್ಮಲ್ಲೂ ಅವರನ್ನ ಸೋಲಿಸಿ ಬುದ್ಧಿ ಕಲಿಸಬೇಕು ಎಂದರು.

ಇದೇ ವೇಳೆ ತಾವು ಮಹಾಲಕ್ಷ್ಮಿ ಲೇಔಟ್​​ನಿಂದ ಉಪ ಚುನಾವಣೆ ಸ್ಪರ್ಧೆ ಮಾಡುವುದಾಗಿ ತಿಳಿಸಿದ ಅವರು, ಔರಾದ್ಕರ್ ಅವರಿಗೆ ಒಳ್ಳೆಯ ಹೆಸರು ಬರುತ್ತದೆ ಎಂದು ರಾಜ್ಯ ಸರ್ಕಾರ ಅವರ ವರದಿಯನ್ನು ಜಾರಿ ಮಾಡಲು ಮುಂದಾಗುತ್ತಿಲ್ಲ ಎಂದು ಕಿಡಿಕಾರಿದರು.

ABOUT THE AUTHOR

...view details