ಮೈಸೂರು:ಹೆಚ್.ಡಿ. ಕೋಟೆ ಬಳಿಯ ಸರಗೂರಿನ ಹಾಲುಗಡೆ ಸಮೀಪ ಕಬಿನಿ ನದಿಯಲ್ಲಿ ಚಿರತೆಯೊಂದರ ಕಳೇಬರ ಪತ್ತೆಯಾಗಿದೆ.
ಕಬಿನಿ ನದಿಯಲ್ಲಿ ಚಿರತೆಯ ಕಳೇಬರ ಪತ್ತೆ... ಅರಣ್ಯಾಧಿಕಾರಿಗಳಿಂದ ಪರಿಶೀಲನೆ - ಕಬಿನಿ ನದಿಯಲ್ಲಿ ಚಿರತೆಯ ಮೃತ ದೇಹ ಪತ್ತೆ
ಹೆಚ್.ಡಿ ಕೋಟೆ ತಾಲೂಕಿನಲ್ಲಿರುವ ಕಬನಿ ನದಿಯಲ್ಲಿ ಸಾವನ್ನಪ್ಪಿರುವ ಚಿರತೆಯ ಕಳೇಬರ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ.
![ಕಬಿನಿ ನದಿಯಲ್ಲಿ ಚಿರತೆಯ ಕಳೇಬರ ಪತ್ತೆ... ಅರಣ್ಯಾಧಿಕಾರಿಗಳಿಂದ ಪರಿಶೀಲನೆ Leopard's dead body found in Kabini River](https://etvbharatimages.akamaized.net/etvbharat/prod-images/768-512-6825600-235-6825600-1587104109400.jpg)
ಕಬಿನಿ ನದಿಯಲ್ಲಿ ಚಿರತೆಯ ಮೃತ ದೇಹ ಪತ್ತೆ.
ಈ ಚಿರತೆ ಹೇಗೆ ಸಾವನ್ನಪ್ಪಿದೆ ಹಾಗೂ ಹೇಗೆ ನದಿಯಲ್ಲಿ ತೇಲಿಕೊಂಡು ಬಂತು ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ. ಈ ಸಂಬಂಧ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.