ಕರ್ನಾಟಕ

karnataka

ETV Bharat / state

ಮೈಸೂರು: ಉರುಳಿಗೆ ಸಿಲುಕಿ 3 ವರ್ಷದ ಹೆಣ್ಣು ಚಿರತೆ ಸಾವು

ಜಮೀನಿನಲ್ಲಿ ಹಾಕಿದ್ದ ಉರುಳಿಗೆ ಸಿಲುಕಿಕೊಂಡು ಹೆಣ್ಣು ಚಿರತೆ ಸಾವನ್ನಪ್ಪಿದೆ.

By

Published : Feb 28, 2023, 9:06 PM IST

Updated : Feb 28, 2023, 9:50 PM IST

ಹೆಣ್ಣು ಚಿರತೆ ಸಾವು
ಹೆಣ್ಣು ಚಿರತೆ ಸಾವು

ಉರುಳಿಗೆ ಸಿಲುಕಿ 3 ವರ್ಷದ ಹೆಣ್ಣು ಚಿರತೆ ಸಾವು

ಮೈಸೂರು: ಉರುಳಿಗೆ ಸಿಲುಕಿ ಮೂರು ವರ್ಷದ ಹೆಣ್ಣು ಚಿರತೆ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕಗ್ಗಲಿ ಹುಂಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಂದ್ರಶೇಖರ್ ಎಂಬುವವರ ಜಮೀನಿನಲ್ಲಿ ಘಟನೆ ನಡೆದಿದೆ. ಜಮೀನಿನ ಸುತ್ತಲೂ ತಂತಿ ಬೇಲಿ ಅಳವಡಿಸಲಾಗಿದ್ದು, ಬ್ರೇಕ್ ವೈರ್​ನಲ್ಲಿ ಉರುಳು ತಯಾರಿಸಿ ಕಟ್ಟಲಾಗಿತ್ತು. ಕಬ್ಬಿನ ಗದ್ದೆಯನ್ನು ಚಿರತೆ ಪ್ರವೇಶಿಸುವಾಗ ಉರುಳಿಗೆ ಸಿಲುಕಿದೆ. ಬಳಿಕ ಬಿಡಿಸಿಕೊಳ್ಳಲಾಗದೇ ಸುಮಾರು ಒಂದು ಗಂಟೆಗಳ ಕಾಲ ನರಳಾಡಿ ಚಿರತೆ ಸಾವನ್ನಪ್ಪಿದೆ.

ಚಿರತೆ ನರಳಾಟದ ವಿಡಿಯೋವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ, "ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸಿಲುಕಿರುವ ಬಗ್ಗೆ ತಿಳಿಸಲಾಗಿದೆ. ಬೆಳಗ್ಗೆ 8 ಗಂಟೆಗೆ ಈ ಬಗ್ಗೆ ಇಲಾಖೆಗೆ ತಿಳಿಸಿದ್ದು ಈವರೆಗೂ ಯಾರt ಸ್ಥಳಕ್ಕಾಗಮಿಸಿಲ್ಲ" ಎಂದು ಮಾತನಾಡಿದ್ದಾರೆ. ಅಲ್ಲದೇ ಚಿರತೆಯ ನರಳಾಟದ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಚಿರತೆ ಸಾವಿನ ಬಳಿಕ ಸ್ಥಳಕ್ಕೆ ನಂಜನಗೂಡು ವಲಯ ಅರಣ್ಯ ಅಧಿಕಾರಿ ಕಿರಣ್ ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. "ಜಮೀನಿನಲ್ಲಿ ಉರುಳು ಹಾಕಿದ ರೈತನ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ಚಿರತೆ ಸೆರೆಗೆ ಬೋನು ಅಳವಡಿಸಿದ್ದೇವೆ" ಎಂದು ಕಿರಣ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ:ಉರುಳಿಗೆ ಸಿಲುಕಿ ಚಿರತೆ ಸಾವು: ಪ್ರಕರಣ ದಾಖಲು

ಕೆಲ ದಿನಗಳ ಹಿಂದೆ ಮೂಡಿಗೆರೆ ತಾಲೂಕಿನ ಬಿಳಗುಳ ಕೊಲ್ಲಿಬೈಲ್​ನಲ್ಲಿ ಕಾಡು ಹಂದಿ ಬೇಟೆಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿತ್ತು. ಲಕ್ಷ್ಮಣ ಗೌಡ ಎಂಬುವವರಿಗೆ ಸೇರಿದ ಪಾಳು ಬಿದ್ದ ಕಾಫಿ ತೋಟದಲ್ಲಿ ಕಾಡು ಹಂದಿ ಬೇಟೆಗಾಗಿ ದುಷ್ಕರ್ಮಿಗಳು ಉರುಳಿಟ್ಟಿದ್ದರು. ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಮೀಪ ರಾತ್ರಿ ವೇಳೆ ಘಟನೆ ನಡೆದಿತ್ತು.

ಇದನ್ನೂ ಓದಿ:ಕಾಫಿನಾಡ ಅರಣ್ಯ ಇಲಾಖೆಯಲ್ಲಿ ಅರಿವಳಿಕೆ ಮದ್ದು ಕೊರತೆ: ಬೇಟೆಗಾರರ ಉರುಳಿಗೆ ಪ್ರಾಣಬಿಟ್ಟ ಚಿರತೆ

ಚಿರತೆಯ ಕೂಗಾಟ ಕೇಳಿದ ದಾರಿಹೋಕ ಪ್ರಯಾಣಿಕರಿಗೆ ಚಿರತೆ ಉರುಳಿಗೆ ಸಿಲುಕಿರುವುದು ಕಂಡು ಬಂದಿತ್ತು. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಬದುಕಿಸಲು ಪ್ರಯತ್ನಪಟ್ಟಿದ್ದರು. ಆದರೆ ಕುತ್ತಿಗೆಗೆ ಉರುಳು ಬಲವಾಗಿ ಸಿಲುಕಿ ಮೃತಪಟ್ಟಿತ್ತು. ಈ ಪ್ರಕರಣದಲ್ಲಿ ತೋಟದ ಮಾಲೀಕ ಮತ್ತು ಉರಳು ಹಾಕಿದ್ದ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ:ಉರುಳಿಗೆ ಸಿಲುಕಿ ಚಿರತೆ ಸಾವು: ಪ್ರಕರಣ ದಾಖಲು

Last Updated : Feb 28, 2023, 9:50 PM IST

ABOUT THE AUTHOR

...view details