ಮೈಸೂರು: ಮುದ್ದಾದ ಚಿರತೆ ಮರಿಯೊಂದು ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಕಬ್ಬಿನ ಗದ್ದೆಯಲ್ಲಿ ಓಡಾಡುತ್ತಿದ್ದ ಚಿರತೆ ಮರಿ ರಕ್ಷಣೆ - Leopard cub in Mysore
ಕೆ.ಆರ್.ನಗರ ಮಿರ್ಲೆ ಗ್ರಾಮದ ಸಂತೋಷ್ ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ ಕೆಲಸಗಾರರ ಮುಂದೆ ಚಿರತೆ ಮರಿ ಓಡಾಡುತ್ತಿತ್ತು.

ಚಿರತೆ
ಕೆ.ಆರ್.ನಗರ ಮಿರ್ಲೆ ಗ್ರಾಮದ ಸಂತೋಷ್ ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ ಕೆಲಸಗಾರರ ಮುಂದೆ ಚಿರತೆ ಮರಿ ಓಡಾಡುತ್ತಿತ್ತು. ಇದನ್ನು ನೋಡಿದ ಕೆಲಸಗಾರರು ತಕ್ಷಣ ಸಂತೋಷ್ಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಸಂತೋಷ್, ಎರಡು ತಿಂಗಳ ಗುಂಡು ಚಿರತೆ ಮರಿಯನ್ನು ತಮ್ಮ ಮನೆಗೆ ತಂದು ಆರೈಕೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.