ಕರ್ನಾಟಕ

karnataka

ETV Bharat / state

ಚಿರತೆ ದಾಳಿಗೆ ಬಲಿಯಾದ ಮೇಕೆ..! - ಚಿರತೆ ದಾಳಿ

ಮನೆಯ ಹಿಂಭಾಗಲ್ಲಿ ಮರದ ಕೊಂಬೆಗೆ ಕಟ್ಟಿ ಹಾಕಿದ ಮೇಕೆಯ ಮೇಲೆ ಚಿರತೆ ದಾಳಿ ನಡೆಸಿದ್ದು , ಮೇಕೆಯ ಕಿರುಚಾಟಕ್ಕೆ ಸ್ಥಳಕ್ಕೆ ಜನರು ಬಂದಿದ್ದಾರೆ.

leopard attack on The goat
ಚಿರತೆ ದಾಳಿಗೆ ಬಲಿಯಾದ ಮೇಕೆ

By

Published : Jul 4, 2020, 9:58 PM IST

ಮೈಸೂರು: ಮರದ ಕೊಂಬೆಗೆ ಕಟ್ಟಿ ಹಾಕಿದ್ದ ಮೇಕೆಯ ಮೇಲೆ ಚಿರತೆಯೊಂದು ದಾಳಿ ನಡೆಸಿ, ಕೊಂದು ಹಾಕಿರುವ ಘಟನೆ ಎಚ್.ಡಿ. ಕೋಟೆ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಮನೆಯ ಹಿಂಭಾಗ ಮರದ ಕೊಂಬೆಗೆ ಕಟ್ಟಿ ಹಾಕಿದ ಮೇಕೆಯ ಮೇಲೆ ಚಿರತೆ ದಾಳಿ ನಡೆಸಿದ್ದು , ಮೇಕೆಯ ಕಿರುಚಾಟ ಕೇಳಿ ಸ್ಥಳಕ್ಕೆ ಜನರು ಬಂದಿದ್ದಾರೆ.

ಜನರ ಕೂಗಾಟದ ಶಬ್ದಕ್ಕೆ ಚಿರತೆ ಪರಾರಿಯಾಗಿದೆ. ಈ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

ABOUT THE AUTHOR

...view details