ಮೈಸೂರು:ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತರ ಹಲ್ ಕಿಸ್ಕೊಂಡು ನಿಂತಿಲ್ಲ. ಎಷ್ಟು ಜನ ಬಡವರ ನಿಮ್ಮ ಮನೆ ಮುಂದೆ ಬಂದಿದ್ದಾರೆ. ನಮಗೆ ಬಡವರೊಂದಿಗೆ ಭಾವಾನಾತ್ಮಕ ಸಂಬಂಧವಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಕ್ಸಮರ ನಡೆಸಿದರು.
ಹುಣಸೂರಿನ ಧರ್ಮಪುರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಡವರ ಊಟಕ್ಕಾಗಿ ಪರದಾಡುತ್ತಿದ್ದಾರೆ. ನಾನು ಅವರ ಕಷ್ಟಗಳನ್ನು ಕಂಡು ಕಣ್ಣೀರು ಕಂಡು ಹಾಕುತ್ತೀನಿ. ನಿಮ್ಮಿಂದ ನಾನು ಪಾಠ ಕಲಿಯಬೇಕಿಲ್ಲ. ಹೃದಯವೇ ಇಲ್ಲದ ನಿಮಗೆ ಕಣ್ಣೀರು ಹೇಗೆ ಬರುತ್ತದೆ. ಗ್ಲಿಸರಿನ್ ಅವಶ್ಯಕತೆ ಇರುವುದು ನನಗಲ್ಲ, ನಿಮಗೆ. ನನಗೆ ನೋವು ಹೃದಯದಿಂದ ಬರುತ್ತದೆ. ಬಿಜೆಪಿಯವರು ಏನಾದರೂ ಹೇಳಲಿ. ನನ್ನ ಸಿದ್ದಾಂತಗಳೇ ಬೇರೆ. ಸದಾನಂದಾಗೌಡರನ್ನಾಗಲಿ, ಬಿಜೆಪಿಯನ್ನಾಗಿಲಿ ಮೆಚ್ಚಿಸಲು ನಾನು ಕಣ್ಣಿರು ಹಾಕುತ್ತಿಲ್ಲ. ನಿಮ್ಮಿಂದ ಸದಾನಂದಗೌಡ ಯಾವುತ್ತಾದರೂ ಬಡವರ ಕಣ್ಣೀರು ಒರೆಸಿದ್ದಾರಾ? , ಪ್ರವಾಹವಾಗಿದೆ ಎಷ್ಟು ಜಿಲ್ಲೆಗೆ ಭೇಟಿ ಕೊಟ್ಟರು? ಎಂದು ಟೀಕೆ ಮಾಡಿದರು.
ಈಗ ಚುನಾವಣೆಗೆ ಪ್ರವಾಹದಂತೆ ಹಣ ಹರಿಸುತ್ತಿದೆ. ಪ್ರವಾಹ ಸ್ಥಳಗಳಲ್ಲಿ ಯಾವ ಅಭಿವೃದ್ಧಿಯಾಗಿಲ್ಲ.ಈ ಕುರಿತು ಸದಾನಂದಗೌಡ ಪ್ರಶ್ನಿಸಿದ್ದಾರೆಯೇ? ನಮ್ಮ ಕಣ್ಣೀರು ಪೇಟೆಂಟ್ ಅಂದ್ಕೊಳ್ಳಿ.ಆದರೆ ಬಡವರ ಜೊತೆ ಚೆಲ್ಲಾಟ ಅಡಬೇಡಿ ಎಂದರು.