ಕರ್ನಾಟಕ

karnataka

ETV Bharat / state

ಪ್ರಯಾಣದಿಂದ ದೂರ ಉಳಿದ ಸಾರ್ವಜನಿಕರು, ಬಿಕೋ ಎನ್ನುತ್ತಿದೆ ಬಸ್‌ಸ್ಟ್ಯಾಂಡ್‌ - ನಾಳೆ ಸಾರಿಗೆ ನೌಕರರ ಮುಷ್ಕರ

ಕೊರೊನಾ ಎರಡನೇ ಅಲೆ ಭೀತಿ, ಸಾರಿಗೆ ಮುಷ್ಕರದ ಬಿಸಿಯಿಂದ ಕಂಗೆಟ್ಟ ಪ್ರಯಾಣಿಕರು ಪ್ರತಿಭಟನೆ ಆರಂಭಕ್ಕೂ ಎಚ್ಚರಿಕೆಯಿಂದಿರಲು ನಿರ್ಧರಿಸಿರುವಂತಿದೆ.

Transport employees strike tomorrow
ನಾಳೆ ಸಾರಿಗೆ ನೌಕರರ ಮುಷ್ಕರ

By

Published : Apr 6, 2021, 12:17 PM IST

ಮೈಸೂರು: ವಿವಿಧ ಬೇಡಿಕೆ ಈಡೇರಿಸುವಂತೆ ನಾಳೆ ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಇಂದೇ ಪ್ರಯಾಣಿಕರು ಕೇಂದ್ರೀಯ ಬಸ್ ನಿಲ್ದಾಣದಿಂದ ದೂರ ಸರಿದಿದ್ದಾರೆ.

ಒಂದೆಡೆ ಕೊರೊನಾ ಎರಡನೇ ಅಲೆ ಭೀತಿ, ಮತ್ತೊಂದೆಡೆ ಸಾರಿಗೆ ಮುಷ್ಕರದ ಬಿಸಿಯಿಂದ ಕಂಗೆಟ್ಟ ಪ್ರಯಾಣಿಕರು ಪ್ರತಿಭಟನೆ ಆರಂಭಕ್ಕೂ ಮುನ್ನವೇ ಊರು ಸೇರುತ್ತಿದ್ದಾರೆ. ಪ್ರಯಾಣಿಕರಿಲ್ಲದೇ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ.

ಮೈಸೂರಿನಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಬೆರಳೆಣಿಕೆಯಷ್ಟು ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಕಳೆದ ಬಾರಿ ಸಾರಿಗೆ ನೌಕರರು ನಡೆಸಿದ ಪ್ರತಿಭಟನೆಯಿಂದ ಪ್ರಯಾಣಿಕರು ಎಚ್ಚೆತ್ತುಕೊಂಡಿದ್ದಾರೆ.

ಇದನ್ನೂ ಓದಿ: ನಾಳೆ ಸಾರಿಗೆ ನೌಕರರ ಮುಷ್ಕರ ಬಹುತೇಕ ಫಿಕ್ಸ್; ಬೇಡಿಕೆ ಈಡೇರಿಸುತ್ತಾ ಸರ್ಕಾರ?

ABOUT THE AUTHOR

...view details