ಕರ್ನಾಟಕ

karnataka

ETV Bharat / state

ಬೆಂಗಳೂರು ಗಾಂಜಾ ದಂಧೆ...‌ ಬಂಧಿತ ಆರೋಪಿ ಕೈಸರ್​ಗಿದೆ ರಾಜಕೀಯ ನಂಟು! - ಸ್ಯಾಂಡಲ್​ವುಡ್​ ಡ್ರಗ್ಸ್​ ದಂಧೆ ಆರೋಪ

ಬೆಂಗಳೂರಲ್ಲಿ ಎನ್​ಸಿಬಿ ತಂಡ ಡ್ರಗ್ಸ್ ದಂಧೆಕೋರರ ಜನ್ಮ ಜಾಲಾಡಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾ ಸಾಗಣೆ ವಿಚಾರದಲ್ಲಿ ಬಂಧಿತನಾಗಿರುವ ಕೈಸರ್ ಪಾಷ ಮೈಸೂರಿನವನು. ಈತ ಕಳೆದ ಬಾರಿ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ.

ಕೈಸರ್ ಪಾಷ
ಕೈಸರ್ ಪಾಷ

By

Published : Aug 27, 2020, 3:57 PM IST

Updated : Aug 27, 2020, 4:08 PM IST

ಮೈಸೂರು: ಬೆಂಗಳೂರಿನ ಎನ್​ಸಿಬಿ ಪೊಲೀಸರು ಗಾಂಜಾ ದಂಧೆಯಲ್ಲಿ ಮೂವರನ್ನು ಬಂಧಿಸಿದ್ದು, ಅದರಲ್ಲಿ ಕೈಸರ್ ಪಾಷ ಎಂಬ ಆರೋಪಿ ಮೈಸೂರು ಮೂಲದವನಾಗಿದ್ದಾನೆ.

ಬೆಂಗಳೂರಿನ‌ ಎನ್​ಸಿಬಿ ಪೊಲೀಸರು 1 ಕೋಟಿ ಮೌಲ್ಯದ 204 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದು, ಈ ಕೇಸ್​ನಲ್ಲಿ ಮೂವರನ್ನು ಬಂಧಿಸಲಾಗಿದೆ. ಅದರಲ್ಲಿ ಮೈಸೂರು ಮೂಲದ ಕೈಸರ್ ಪಾಷ ಕೂಡ ಒಬ್ಬ. ಈತ ಶಾಗಿರ್ದ್​​ ಎಂದು ಕರೆಯಲ್ಪಡುತ್ತಿದ್ದ. ಕೈಸರ್​ ಕಳೆದ ಬಾರಿ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಟಿಕೆಟ್ ಪಡೆಯಲು ವಿಫಲನಾಗಿದ್ದ. ಕೊನೆಗೆ ಜೆಡಿಎಸ್​ನಿಂದ ಟಿಕೆಟ್ ಪಡೆದು ಶಾಂತಿನಗರ ವಾರ್ಡ್​ನಿಂದ ಸ್ಪರ್ಧಿಸಿ 150 ಮತಗಳಿಂದ ಸೋಲನುಭವಿಸಿದ್ದ.

ಕೈಸರ್ ಪಾಷ ಗಾಂಜಾ ಮಾರಾಟದಲ್ಲಿ ಪಳಗಿದವನಾಗಿದ್ದು, ಈತನ ಜಾಲ ಬೃಹತ್​ ಪ್ರಮಾಣದಲ್ಲಿದೆ. ಮೈಸೂರಿನ ಕೆಲವು ಭಾಗಗಳಿಗೂ ಗಾಂಜಾ ಸರಬರಾಜು ಮಾಡುತ್ತಿದ್ದ ಎನ್ನಲಾಗ್ತಿದೆ.

ಮಾದಕ ವಸ್ತುಗಳ ದಂಧೆಯಲ್ಲಿ ಸ್ಯಾಂಡಲ್​​ವುಡ್ ಘಾಟು... ಡೀಲರ್​​ಗಳ ಹೆಡೆಮುರಿ ಕಟ್ಟಿದ ಎನ್​ಸಿಬಿ

ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಸ್ಯಾಂಡಲ್​ವುಡ್​ನ ಖ್ಯಾತ ನಟರು ಮತ್ತು ಸಂಗೀತ ನಿರ್ದೇಶಕರ ಹೆಸರುಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.

Last Updated : Aug 27, 2020, 4:08 PM IST

ABOUT THE AUTHOR

...view details