ಕರ್ನಾಟಕ

karnataka

ಸಾಫ್ಟ್‌ವೇರ್​​​​​​​​​​​​​​ ಉದ್ಯೋಗಿಗಳಿಗೆ ದೈಹಿಕ ಪಾಠ ಹೇಳಿದ ಮಾಜಿ ಕ್ರಿಕೆಟಿಗ ಜಾವಗಲ್​​ ಶ್ರೀನಾಥ್

ಐಟಿ ಮಂದಿಗೆ ದೈಹಿಕ ಪಾಠ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್. ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಯುನಿಲಾಗ್ ಕಂಟೆಂಟ್ ಸಲ್ಯೂಷನ್ ಸಾಫ್ಟ್​ವೇರ್​​ ಕಂಪನಿಯ ಉದ್ಯೋಗಿಗಳಿಗೆ ಕ್ರೀಡಾಕೂಟ ಆಯೋಜನೆ.

By

Published : Jul 15, 2019, 8:29 PM IST

Published : Jul 15, 2019, 8:29 PM IST

Updated : Jul 15, 2019, 9:22 PM IST

ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಮೈಸೂರು: ಸದಾ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ದೈಹಿಕ ಆರೋಗ್ಯದ ಬಗ್ಗೆ ಪಾಠ ಹೇಳಿದರು.

ಮೈಸೂರು ಮೂಲದ ಯುನಿಲಾಗ್ ಕಂಟೆಂಟ್ ಸಲ್ಯೂಷನ್ ಸಾಫ್ಟ್​ವೇರ್​​ ಕಂಪನಿಯು ಬೆಂಗಳೂರು, ಮೈಸೂರು, ಲಂಡನ್, ಅಮೆರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿ ತನ್ನ ಶಾಖೆ ಹೊಂದಿದೆ. ಇದು ಸುಮಾರು 1000ಕ್ಕೂ ಹೆಚ್ಚು ಜನ ಉದ್ಯೋಗಿಗಳನ್ನು ಹೊಂದಿದೆ. ಇಂತಹ ಉದ್ಯೋಗಿಗಳು ವರ್ಷವಿಡೀ ಕಂಪ್ಯೂಟರ್ ಮುಂದೆ ಕುಳಿತಿರುತ್ತಾರೆ.‌

ಇಂತಹ ಉದ್ಯೋಗಿಗಳಿಗೆ ಪ್ರತಿ ವರ್ಷ ಜುಲೈ ಹಾಗೂ ಆಗಸ್ಟ್ ತಿಂಗಳ ವಾರಾಂತ್ಯದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದ್ದು, ಇಂತಹ ಕ್ರೀಡಾಕೂಟಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂದು ಈ ಸಂಸ್ಥೆಯ ರಾಯಭಾರಿಯಾದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ತಿಳಿಸಿಕೊಟ್ಟರು.

ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಈ ಎರಡು ತಿಂಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಥ್ರೋ ಬಾಲ್, ವಾಲಿಬಾಲ್, ಫುಟ್ಬಾಲ್, ಕ್ರಿಕೆಟ್ ಜೊತೆಗೆ ಒಳಾಂಗಣ ಕ್ರೀಡೆಗಳಾದ ಸ್ನೂಕರ್‌, ಚೆಸ್, ಶೆಟಲ್, ಬ್ಯಾಡ್ಮಿಂಟನ್ ಹಾಗೂ ಕೇರಂ ಆಡಿಸಲಾಗುತ್ತದೆ.

Last Updated : Jul 15, 2019, 9:22 PM IST

For All Latest Updates

TAGGED:

ABOUT THE AUTHOR

...view details