ಮೈಸೂರು:ಮುಂದಿನ ತಿಂಗಳೊಳಗೆ ಪರಿವಾರ-ತಳವಾರ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವಂತಹ ಕೆಲಸ ಮಾಡಿಕೊಡುತ್ತೇನೆ ಎಂದು ಸಚಿವ ಶ್ರೀರಾಮುಲು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಪರಿವಾರ-ತಳವಾರ ಸಮುದಾಯ ಎಸ್ಟಿಗೆ ಸೇರಿಸುತ್ತೇನೆ: ಶ್ರೀರಾಮುಲು ಭರವಸೆ - Ramulun statementy in hunasuru
ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಚಿವ ಶ್ರೀರಾಮುಲು, ಕಲ್ ಕೂಡಿಕೆ ಗ್ರಾಮಸ್ಥರಲ್ಲಿ ಪರಿವಾರ-ತಳವಾರ ಸಮುದಾಯವನ್ನು ಎಸ್ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದಾರೆ.
![ಪರಿವಾರ-ತಳವಾರ ಸಮುದಾಯ ಎಸ್ಟಿಗೆ ಸೇರಿಸುತ್ತೇನೆ: ಶ್ರೀರಾಮುಲು ಭರವಸೆ SriRamulu](https://etvbharatimages.akamaized.net/etvbharat/prod-images/768-512-5192657-thumbnail-3x2-vicky.jpg)
ಪರಿವಾರ-ತಲವಾರ ಸಮುದಾಯಕ್ಕೆ ಭರವಸೆ ನೀಡಿದ ರಾಮುಲು
ಸಚಿವ ಶ್ರೀರಾಮುಲು
ಹುಣಸೂರು ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿರುವ ಸಚಿವ ಶ್ರೀರಾಮುಲು, ಒಂದು ವಾರದಿಂದ ಹುಣಸೂರಿನಲ್ಲೇ ಠಿಕಾಣಿ ಹೂಡಿದ್ದು, ಇಂದು ಕಲ್ ಕೂಡಿಕೆ ಗ್ರಾಮದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತಾನಾಡಿದರು. ಪರಿವಾರ-ತಳವಾರ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಬೇಕು ಎಂದು ಪಾರ್ಲಿಮೆಂಟ್ನಲ್ಲಿ ಚರ್ಚೆ ಮಾಡಿ, ಮುಂದಿನ ತಿಂಗಳೊಳಗೆ ಈ ಕಾರ್ಯ ಪೂರ್ಣಗೊಳ್ಳುವಂತೆ ಕೆಲಸ ಮಾಡಿಕೊಡುತ್ತೇನೆ ಎಂದರು.