ಕರ್ನಾಟಕ

karnataka

ETV Bharat / state

ಮೈಮುಲ್ ಚುನಾವಣೆಗೆ ನಾನು ಧುಮುಕಿಲ್ಲ: ಜಿ.ಟಿ.ದೇವೇಗೌಡ - Maimul election in mysore news

ನಾನು ಮೈಮುಲ್​​ ಚುನಾವಣಾ ಅಖಾಡಕ್ಕಿಳಿದಿಲ್ಲ. ನನ್ನ ಮಗ ಹರೀಶ್ ಹಾಗೂ ಸಹಕಾರಿಗಳು ಚುನಾವಣೆ ಎದುರಿಸಿದ್ದಾರೆ. ನಾನು ಪ್ರವೇಶ ಮಾಡಿದ್ರೆ, ನಾನು ವರ್ಸಸ್ ಕುಮಾರಸ್ವಾಮಿ ಆಗಿರೋದು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.

G.T. Devegowda
ಶಾಸಕ ಜಿ.ಟಿ. ದೇವೇಗೌಡ

By

Published : Mar 16, 2021, 8:49 PM IST

Updated : Mar 17, 2021, 8:50 AM IST

ಮೈಸೂರು:ನಾನು ಮೈಮುಲ್ ಚುನಾವಣೆಗೆ ಧುಮುಕ್ಕಿಲ್ಲ. ನಾನು ಪ್ರವೇಶ ಮಾಡಿದ್ರೆ, ನಾನು ವರ್ಸಸ್ ಕುಮಾರಸ್ವಾಮಿ ಆಗಿರೋದು ಎಂದು ಹೇಳುವ ಮೂಲಕ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ಜೆಡಿಎಸ್ ದಳಪತಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ.

ಶಾಸಕ ಜಿ.ಟಿ. ದೇವೇಗೌಡ

ಮೈಮುಲ್ ಚುನಾವಣೆ ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ನಾನು ಅಖಾಡಕ್ಕೆ ಇಳಿದಿಲ್ಲ. ನನ್ನ ಮಗ ಹರೀಶ್ ಹಾಗೂ ಸಹಕಾರಿಗಳು ಚುನಾವಣೆ ಎದುರಿಸಿದ್ದಾರೆ. ಜಿಟಿಡಿ ಏನೋ ಮಾಡದೇ ಇದ್ದರು, ನನ್ನ ವಿರುದ್ಧ ಅವರು (ಕುಮಾರಸ್ವಾಮಿ) ತಿರುಗಿ ಬಿದ್ದಿದ್ದಾರೆ ಎಂದು ಕುಟುಕಿದರು.

ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಬಾಮೈದ ಕೆ.ಎಸ್.ಮಧುಚಂದ್ರ ಅವರಿಗೆ ಚುನಾವಣೆ ಕಷ್ಟ ಅಂತ ಹೇಳಿದ್ದೆ. ಆದರೆ, ಅವರು ಕೇಳಲಿಲ್ಲ ಎಂದರು.

ಇದನ್ನೂ ಓದಿ: ಮೈಮುಲ್ ಚುನಾವಣೆಯಲ್ಲಿ ರೇವಣ್ಣ ಬಾಮೈದನಿಗೆ ಸೋಲು: ಹೆಚ್​ಡಿಕೆಗೆ ಸೆಡ್ಡು ಹೊಡೆದ ಜಿಟಿಡಿ

ಸಾ.ರಾ. ಮಹೇಶ್​ಗೆ ಟಾಂಗ್:

ಸಹಕಾರಿ ಚುನಾವಣೆಯನ್ನು ಸಹಕಾರಿ ಮನೋಭಾವನೆಯಲ್ಲಿ ನೋಡಬೇಕು. ಸರ್ಕಾರದ ಸಂಸ್ಥೆ ಅಂತ ನೋಡಬಾರದು ಎಂದು ಟಾಂಗ್ ಕೊಟ್ಟಿದ್ದಾರೆ.

Last Updated : Mar 17, 2021, 8:50 AM IST

ABOUT THE AUTHOR

...view details