ಕರ್ನಾಟಕ

karnataka

ಯಾವುದೇ ರೀತಿಯ ಬಹಿರಂಗ ಚರ್ಚೆಗೆ ನಾನು ಸಿದ್ಧ: ವಿಶ್ವನಾಥ್​​ಗೆ ಸಾ.ರಾ.ಮಹೇಶ್​​ ಸವಾಲ್​​​​​

By

Published : Aug 5, 2019, 2:15 PM IST

ಮೈಸೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ.ಮಹೇಶ್, ನಿನ್ನೆ ವಿಶ್ವನಾಥ್ ಮಾಡಿರುವ ಆರೋಪಗಳಿಗೆ ಬಹಿರಂಗ ಸವಾಲು ಹಾಕಿದ್ರು. ನೀವು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಿಲ್ಲ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಸತ್ಯ ಮಾಡಿ. ಸತ್ಯಾಸತ್ಯತೆಯನ್ನು ತಾಯಿ ಚಾಮುಂಡಿ ನೋಡಿಕೊಳ್ಳುತ್ತಾಳೆ. ನೀವು ಮಾಡಿರುವ ಆರೋಪಗಳು ಸತ್ಯ ಎಂದು ಹೇಳಿ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಅಲ್ಲದೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಹೇಳಿ ಸಾ.ರಾ.ಮಹೇಶ್, ವಿಶ್ವನಾಥ್​​ಗೆ ಬಹಿರಂಗ ಸವಾಲು ಹಾಕಿದ್ರು.

ಮಾಜಿ ಸಚಿವ ಸಾ.ರಾ. ಮಹೇಶ್

ಮೈಸೂರು:ವಿಶ್ವನಾಥ್ ಯಾವುದೇ ಆಸೆ, ಆಮಿಷಗಳಿಗೆ ಬಲಿ ಆಗಿಲ್ಲ ಎಂದು ಚಾಮುಂಡಿ ಬೆಟ್ಟದಲ್ಲಿ ಬಂದು ಸತ್ಯ ಮಾಡಲಿ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್, ಹೆಚ್.ವಿಶ್ವನಾಥ್​​ಗೆ ಬಹಿರಂಗ ಸವಾಲು ಹಾಕಿದ್ದಾರೆ.

ಇಂದು ಮೈಸೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ, ಶಾಸಕ ಸಾ.ರಾ.ಮಹೇಶ್, ನಿನ್ನೆ ವಿಶ್ವನಾಥ್ ಮಾಡಿರುವ ಆರೋಪಗಳಿಗೆ ಬಹಿರಂಗ ಸವಾಲು ಹಾಕಿದ್ರು. ನೀವು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಿಲ್ಲ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಸತ್ಯ ಮಾಡಿ. ಸತ್ಯಾಸತ್ಯತೆಯನ್ನು ತಾಯಿ ಚಾಮುಂಡಿ ನೋಡಿಕೊಳ್ಳುತ್ತಾಳೆ. ನೀವು ಮಾಡಿರುವ ಆರೋಪಗಳು ಸತ್ಯ ಎಂದು ಹೇಳಿ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಅಲ್ಲದೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಹೇಳಿ ಸಾ.ರಾ.ಮಹೇಶ್, ವಿಶ್ವನಾಥ್​​ಗೆ ಬಹಿರಂಗ ಸವಾಲು ಹಾಕಿದ್ರು.

ಮಾಜಿ ಸಚಿವ ಸಾ.ರಾ. ಮಹೇಶ್

ಇನ್ನು ನಿನ್ನೆ ದೇವೇಗೌಡರ ಕುಟುಂಬಕ್ಕೆ ವಿಷ ಹಾಕಿದ್ದು ನಾನೇ ಎಂಬ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ವಿಶ್ವನಾಥ್ ಎಂಬ ಕಾರ್ಕೋಟಕ ವಿಷವನ್ನು ಹಾಕಿದ್ದು ನಾನೇ. ನನ್ನದೇ ತಪ್ಪು. ಎಲ್ಲೋ ಇದ್ದ ಹಳ್ಳಿ ಹಕ್ಕಿಯನ್ನು ತಂದು ಜೆಡಿಎಸ್​​ಗೆ ಸೇರಿಸಿದೆ. ಈಗ ಹಕ್ಕಿ ಕಾಲ ಬದಲಾದಂತೆ ಪಕ್ಷವನ್ನು ಬದಲಾಯಿಸುತ್ತಿದೆ. ಇದನ್ನು ಮಾಡಿದ್ದು ನಾನೇ. ನನ್ನ ತಪ್ಪನ್ನು ಒಪ್ಪಿಕೊಳ್ಳತ್ತೇನೆ. ವಿಶ್ವನಾಥ್ ಆರೋಪದ ಬಗ್ಗೆ ಹಾಗೂ ನಿಮ್ಮ‌ ಮಗ ನನ್ನಿಂದ ತೆಗೆದುಕೊಂಡು ಹೋಗಿರುವ ಹಣದ ಬಗ್ಗೆ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಸಿದ್ಧ. ವಿಶ್ವನಾಥ್ ಒಬ್ಬ ರಾಜಕೀಯದ ವ್ಯಭಿಚಾರಿ ಎಂದು ಹೇಳಿ ವಾಗ್ದಾಳಿ ನಡೆಸಿದರು.

ಇನ್ನು ನನ್ನ ಬಳಿಯೇ ವಿಶ್ವನಾಥ್ ನನಗೆ ಬಿಜೆಪಿಗೆ ಬರುವಂತೆ ಒತ್ತಡವಿದೆ‌, ನಾನು ಕಷ್ಟದಲ್ಲಿದ್ದೇನೆ ಎಂದು ಹೇಳಿದಕ್ಕೆ ನಾನು ಅಮೆರಿಕಾದಲ್ಲಿದ್ದರು ಅವರಿಗೆ ಹಣಕಾಸಿನ ಸಹಾಯ ಮಾಡಿದ್ದೇನೆ. ಇದರ ಬಗ್ಗೆ ನನ್ನ ಬಳಿ ದಾಖಲೆಯಿದೆ. ಬಹಿರಂಗ ಚರ್ಚೆಗೆ ಬಂದರೆ ಅದನ್ನು ಬಹಿರಂಗ ಪಡಿಸುತ್ತೇನೆ ಎಂದು ಸಾ.ರಾ.ಮಹೇಶ್ ಹೇಳಿದರು. ಇನ್ನು ಮಾಜಿ ಸಚಿವ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ‌ಶಾಸಕ ಜಿ.ಟಿ.ದೇವೇಗೌಡ ಅಸಮಾಧಾನವನ್ನು ಕುಳಿತು ಬಗೆಹರಿಸುತ್ತೇವೆ ಎಂದರು.‌

ABOUT THE AUTHOR

...view details