ಮೈಸೂರು: ಬಿಟ್ಟುಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಮನೆ ಗೋಡೆ ಕುಸಿದ ಪರಿಣಾಮ ವೃದ್ಧ ಸಾವನ್ನಪ್ಪಿರುವ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಮಾದಾಪುರದಲ್ಲಿ ನಡೆದಿದೆ.
ಮೈಸೂರು: ವರುಣನಾರ್ಭಟಕ್ಕೆ ಕುಸಿದ ಮನೆ ಗೋಡೆ... ವೃದ್ಧ ಸಾವು - ಮನೆ ಗೋಡೆ ಕುಸಿದು ವೃದ್ಧ ಸಾವು
ಮಳೆಗೆ ಮನೆ ಗೋಡೆ ಕುಸಿದು ವೃದ್ಧ ಸಾವನ್ನಪ್ಪಿರುವ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಮಾದಾಪುರದಲ್ಲಿ ನಡೆದಿದೆ.
![ಮೈಸೂರು: ವರುಣನಾರ್ಭಟಕ್ಕೆ ಕುಸಿದ ಮನೆ ಗೋಡೆ... ವೃದ್ಧ ಸಾವು House wall collapse and one died](https://etvbharatimages.akamaized.net/etvbharat/prod-images/768-512-8312951-182-8312951-1596691590151.jpg)
ಭಾರಿ ಮಳೆಗೆ ಮನೆ ಗೋಡೆ ಕುಸಿದು ವೃದ್ಧ ಸಾವು
ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಮಾದಾಪುರ ಗ್ರಾಮದ ಶಿವನಂಜಯ್ಯ(70) ಎಂಬುವರು ಮೃತಪಟ್ಟಿದ್ದಾರೆ. ವೃದ್ಧ ಮನೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಗೋಡೆ ಕುಸಿದಿದ್ದು, ಬಿದ್ದ ಗೋಡೆಯ ಅವಶೇಷಗಳಡಿ ಸಿಲುಕಿ ಶಿವನಂಜಯಯ್ಯ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಮಳೆಯಿಂದ ಸಾವಿಗೀಡಾದ ಎರಡನೇ ಪ್ರಕರಣ ಇದಾಗಿದೆ. ನಿನ್ನೆ ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ನಿಂತಿದ್ದ ಹೆಚ್.ಡಿ. ಕೋಟೆ ತಾಲೂಕಿನ ಅಣ್ಣೂರು ಗ್ರಾಮದ ಮಾದೇಗೌಡ ಎಂಬುವವರ ಮೇಲೆ ಮರ ಬಿದ್ದು ಮೃತಪಟ್ಟಿದ್ದರು.
Last Updated : Aug 6, 2020, 11:34 AM IST