ಕರ್ನಾಟಕ

karnataka

ETV Bharat / state

ಸ್ಕೂಟರ್​ಗೆ ಬಸ್​ ಡಿಕ್ಕಿ: ಶಾಲಾ ಮುಖ್ಯ ಶಿಕ್ಷಕಿ ಸಾವು - ಮಾವತ್ತೂರು ಶಾಲೆಯ ಮುಖ್ಯ ಶಿಕ್ಷಕಿ

ಮಾವತ್ತೂರು ಶಾಲೆಯ ಮುಖ್ಯ ಶಿಕ್ಷಕಿ ಶಾಲೆ ಮುಗಿಸಿಕೊಂಡು ಹಿಂತಿರುಗುತ್ತಿರುವ ವೇಳೆ ಸರ್ಕಾರಿ ಬಸ್​ವೊಂದು ಸ್ಕೂಟರ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಶಿಕ್ಷಕಿ ಮೃತಪಟ್ಟಿದ್ದಾರೆ.

Teacher
ಮೃತ ಶಾಲಾ ಶಿಕ್ಷಕಿ

By

Published : Mar 7, 2020, 4:15 PM IST

ಮೈಸೂರು: ಕೆಎಸ್​ಆರ್​ಟಿಸಿ ಬಸ್​​ಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸಾವನ್ನಪ್ಪಿರುವ ಘಟನೆ ಕೆ.ಆರ್.ನಗರ ತಾಲೂಕಿನ ಗೌಡೇನಹಳ್ಳಿ ಬಳಿ ನಡೆದಿದೆ.

ಕೆ.ಆರ್.ನಗರ ತಾಲೂಕಿನ ಮಾವತ್ತೂರು ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ತಾರಾ (52) ರಸ್ತೆ ಅಪಘಾತದಲ್ಲಿ ಮೃತಪಟ್ಟವರು ಎನ್ನಲಾಗಿದೆ. ಶಾಲೆ ಮುಗಿಸಿಕೊಂಡು ಸ್ಕೂಟರ್​ನಲ್ಲಿ ಕೆ.ಆರ್.ನಗರಕ್ಕೆ ಬರುತ್ತಿದ್ದ ವೇಳೆ ಗೌಡೇನಹಳ್ಳಿ ಬಳಿ ಬಸ್ ಸ್ಕೂಟರ್​​ಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮುಖ್ಯ ಶಿಕ್ಷಕಿ ಸಾವನ್ನಪ್ಪಿದ್ದಾರೆ.

ಮೂಲತಃ ಮೈಸೂರಿನವರಾದ ತಾರಾ, 3 ವರ್ಷಗಳಿಂದ ಮಾವತ್ತೂರು ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂಬಂಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಖ್ಯ ಶಿಕ್ಷಕಿಯ ನಿಧನಕ್ಕೆ ತಾಲೂಕು ಶಿಕ್ಷಕ ಸಂಘ ಸಂತಾಪ ಸೂಚಿಸಿದೆ.

ABOUT THE AUTHOR

...view details