ಮೈಸೂರು :ಎಚ್. ಡಿ. ಕೋಟೆ ಶಾಸಕರು ಸೇರಿದಂತೆ ತಾಲೂಕಿನ ಪ್ರಮುಖ ಅಧಿಕಾರಿಗಳಿಗೆ 7 ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಶಾಸಕರೂ ಸೇರಿ ಪ್ರಮುಖ ಅಧಿಕಾರಿಗಳಿಗೆ ಹೋಮ್ ಕ್ವಾರಂಟೈನ್ : ಎಸ್ಪಿ ಸೂಚನೆ - mysore corona news
ಎಚ್. ಡಿ. ಕೋಟೆ ತಾಲೂಕು ಕಚೇರಿಯಲ್ಲಿ ನಡೆದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಭಾಗಿಯಾದ ಪ್ರತಿಯೊಬ್ಬರು, ಕೊರೊನಾ ವರದಿ ಬರುವವರೆಗೂ ಎಲ್ಲರೂ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ.
![ಶಾಸಕರೂ ಸೇರಿ ಪ್ರಮುಖ ಅಧಿಕಾರಿಗಳಿಗೆ ಹೋಮ್ ಕ್ವಾರಂಟೈನ್ : ಎಸ್ಪಿ ಸೂಚನೆ HD Kote MLA](https://etvbharatimages.akamaized.net/etvbharat/prod-images/768-512-7886693-1010-7886693-1593844121287.jpg)
ಎಚ್. ಡಿ. ಕೋಟೆ ತಾಲೂಕು ಕಚೇರಿಯಲ್ಲಿ ನಡೆದ ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಜೊತೆ ತಾಲೂಕು ತಹಸೀಲ್ದಾರ್, ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಇತರ ತಾಲೂಕಿನ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ಕಲ್ ಇನ್ಸ್ಪೆಕ್ಟರ್ಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆ ಆ ಕಾರ್ಯಕ್ರಮದಲ್ಲಿದ್ದ ಶಾಸಕರು, ಅಧಿಕಾರಿಗಳು, 5 ಜನ ಪತ್ರಕರ್ತರು ಹಾಗೂ 20 ಪೊಲೀಸ್ ಸಿಬ್ಬಂದಿಗೆ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ದರ ವರದಿ ಬರುವವರೆಗೂ ಹೋಮ್ ಕ್ವಾರಂಟೈನ್ನಲ್ಲೇ ಇರಬೇಕೆಂದು ಶಾಸಕರ ಆಪ್ತ ಸಹಾಯಕ ಈಟಿವಿ ಭಾರತ್ಗೆ ಖಚಿತ ಪಡಿಸಿದ್ದಾರೆ, ಶಾಸಕರು ಮನೆಯಿಂದಲೇ ಫೋನ್ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.