ಮೈಸೂರು: ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಮ್ಮ ಮನೆಯ ಬಳಿ ಇದ್ದ ಚಿಕನ್ ಅಂಗಡಿ ಸ್ವಚ್ಛಗೊಳಿಸಿ ಎಂದು ಹೇಳಿದ ಕುಟುಂಬದವರ ಮೇಲೆ ಅಂಗಡಿ ಮಾಲೀಕ ಹಲ್ಲೆ ಮಾಡಿರುವ ಘಟನೆ ನಗರದ ಕುಂಬಾರಕೊಪ್ಪಲಿನಲ್ಲಿ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿಕನ್ ಅಂಗಡಿ ಕ್ಲೀನ್ ಮಾಡಿ ಎಂದಿದ್ದಕ್ಕೆ ಹಿಗ್ಗಾ ಮುಗ್ಗ ಹೊಡೆದ ಮಾಲೀಕ: ಸಿಸಿ ಕ್ಯಾಮೆರಾದಲ್ಲಿ ಸೆರೆ - ಚಿಕನ್ ಅಂಗಡಿ ಮಾಲೀಕನಿಂದ ಹಲ್ಲೆ
ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕನ್ ಅಂಗಡಿ ಸ್ವಚ್ಛಗೊಳಿಸಿ ಎಂದು ಹೇಳಿದ ಕುಟುಂಬದವರ ಮೇಲೆ ಅಂಗಡಿ ಮಾಲೀಕ ಹಲ್ಲೆ ಮಾಡಿರುವ ಘಟನೆ ನಗರದ ಕುಂಬಾರಕೊಪ್ಪಲಿನಲ್ಲಿ ನಡೆದಿದೆ.
![ಚಿಕನ್ ಅಂಗಡಿ ಕ್ಲೀನ್ ಮಾಡಿ ಎಂದಿದ್ದಕ್ಕೆ ಹಿಗ್ಗಾ ಮುಗ್ಗ ಹೊಡೆದ ಮಾಲೀಕ: ಸಿಸಿ ಕ್ಯಾಮೆರಾದಲ್ಲಿ ಸೆರೆ harassment for saying to do clean a chicken shop](https://etvbharatimages.akamaized.net/etvbharat/prod-images/768-512-6436953-thumbnail-3x2-mysore.jpg)
ಮೈಸೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಇನ್ನು ಮುಂದೆ ಚಿಕನ್ ಅಂಗಡಿಯನ್ನು ಬಂದ್ ಮಾಡಬೇಕೆಂದು ತುರ್ತು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬದವರು ತಮ್ಮ ಪಕ್ಕದಲ್ಲೇ ಇದ್ದ ಚಿಕನ್ ಅಂಗಡಿ ಮಾಲೀಕನಿಗೆ ಈ ಬಗ್ಗೆ ತಿಳಿಸಿದಾಗ, ಕೋಪಗೊಂಡ ಮಾಲೀಕನು ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾನೆ.
ಈ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ಇದ್ದ ಜನರು ಇಬ್ಬರನ್ನು ಸಮಾಧಾನ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹಲ್ಲೆ ಮಾಡಲು ಬಂದ ಚಿಕನ್ ಅಂಗಡಿಯ ಮಾಲೀಕನ ವಿರುದ್ಧ ಸಿಸಿಟಿವಿ ದೃಶ್ಯಗಳನ್ನು ಆಧಾರವಾಗಿಟ್ಟುಕೊಂಡು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.