ಕರ್ನಾಟಕ

karnataka

By

Published : Dec 27, 2019, 12:25 PM IST

ETV Bharat / state

ಕುಮಾರಸ್ವಾಮಿ ಅವರು ನನ್ನ ಮಾತು ಪರಿಗಣಿಸಲ್ಲ: ಜಿ‌.ಟಿ.ದೇವೇಗೌಡ ಅಸಮಾಧಾನ

ಮೈಸೂರು ಮೇಯರ್-ಉಪಮೇಯರ್ ಚುನಾವಣೆಯಲ್ಲಿ ನನ್ನ ಮಾತನ್ನು ವರಿಷ್ಠರು ಪರಿಗಣಿಸುವುದಿಲ್ಲವೆಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

GTD Talking About To Mayor Election
ಕುಮಾರಸ್ವಾಮಿ ಅವರು ನನ್ನ ಮಾತು ಪರಿಗಣಿಸಲ್ಲ: ಜಿ‌.ಟಿ ದೇವೇಗೌಡ

ಮೈಸೂರು: ಮೇಯರ್-ಉಪಮೇಯರ್ ಚುನಾವಣೆಯಲ್ಲಿ ನನ್ನ ಮಾತನ್ನು ವರಿಷ್ಠರು ಪರಿಗಣಿಸುವುದಿಲ್ಲವೆಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬೇಸರ ಹೊರಹಾಕಿದ್ದಾರೆ.

ವಿಜಯನಗರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಟಿಡಿ, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಅಥವಾ ನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಮತದಾರನಾಗಿದ್ದಾಲೂ ಅಷ್ಟೇ. ಪಕ್ಷದಲ್ಲಿ ನನ್ನ ಮಾತು ನಡೆಯುವುದಿಲ್ಲ. ಕಳೆದ ಬಾರಿ ಚಲುವೇಗೌಡರನ್ನ ಮೇಯರ್ ಮಾಡಬೇಕು ಎಂದುಕೊಂಡಿದ್ದೆ, ಆದರೆ ಆಗಲಿಲ್ಲ. ಕುಮಾರಸ್ವಾಮಿಯವರು ಸಾ.ರಾ.ಮಹೇಶ್ ಮಾತಿಗೆ ಮನ್ನಣೆ ಕೊಡುತ್ತಾರೆ ಎಂದು ಅಸಮಾಧಾನ ತೋಡಿಕೊಂಡರು.

ಕುಮಾರಸ್ವಾಮಿ ಅವರು ನನ್ನ ಮಾತು ಪರಿಗಣಿಸಲ್ಲ: ಜಿ‌.ಟಿ ದೇವೇಗೌಡ

ಮೇಯರ್ -ಉಪಮೇಯರ್ ಗೆ ಮೀಸಲಾತಿಯನ್ನು ಗುರುವಾರವಷ್ಟೇ ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಕುರಿತಾಗಿ ನನ್ನನ್ನು ಯಾರೂ ಸಂಪರ್ಕಿಸಿಲ್ಲ, ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಈ ಚುನಾವಣೆಯಲ್ಲಿ ತಟಸ್ಥನಾಗಿರುವುದಿಲ್ಲ ಎಂದರು.

ಇನ್ನು, ಪೌರತ್ವ ಕಾಯ್ದೆ ಬಗೆಗಿನ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕರ ಆಸ್ತಿಗೆ ಹಾನಿ ಮಾಡುವುದು ತಪ್ಪು.ಸರ್ಕಾರ ಜನರ ಪ್ರತಿಭಟನೆ ಹಕ್ಕನ್ನು ಕಸಿದುಕೊಳ್ಳಬಾರದು, ಇದರ ಬಗ್ಗೆ ಸರ್ಕಾರ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ABOUT THE AUTHOR

...view details