ಕರ್ನಾಟಕ

karnataka

By

Published : Jul 16, 2021, 7:41 PM IST

ETV Bharat / state

ಸಹಕಾರಿ ಸಂಘಗಳ ಚುನಾವಣೆಗೆ ಸರ್ಕಾರ ಒಪ್ಪಿಗೆ: ಸಚಿವ ಎಸ್.ಟಿ.ಸೋಮಶೇಖರ್

ಕೋವಿಡ್ ಹಿನ್ನೆಲೆಯಲ್ಲಿ ಸಂಘ ಸಂಸ್ಥೆಗಳು, ಕೋ ಆಪರೇಟಿವ್, ಸಹಕಾರಿ ಸಂಘ ಸಂಸ್ಥೆಗಳ ಚುನಾವಣೆಯನ್ನು ಸರ್ಕಾರ ತಡೆ ಹಿಡಿದಿತ್ತು. ಆದರೆ ಈಗ ಚುನಾವಣೆ ನಡೆಸಲು ಅನುಮತಿ ನೀಡಿದೆ- ಸಚಿವ ಎಸ್.ಟಿ.ಸೋಮಶೇಖರ್

Minister ST Somashekar
ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು:ಎಪಿಎಂಸಿ ಹಾಗು ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಸರ್ಕಾರ ಒಪ್ಪಿಗೆ ನೀಡಿದ್ದು, ಅಧಿಕಾರ ಗದ್ದುಗೆಗಾಗಿ ಕಾದಿದ್ದ ಆಕಾಂಕ್ಷಿಗಳಿಗೆ ಈ ಮೂಲಕ ಶುಭ ಸುದ್ದಿ ಸಿಕ್ಕಿದೆ.

ಚಾಮುಂಡಿ ಬೆಟ್ಟದ ತಪ್ಪನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಕೋವಿಡ್ ಹಿನ್ನೆಲೆಯಲ್ಲಿ ಸಂಘ ಸಂಸ್ಥೆಗಳು, ಕೋಆಪರೇಟಿವ್, ಸಹಕಾರಿ ಸಂಘ ಸಂಸ್ಥೆಗಳ ಚುನಾವಣೆಗೆ ಸರ್ಕಾರ ತಡೆ ಹಿಡಿದಿತ್ತು. ಆದರೆ ಈಗ ಚುನಾವಣೆ ನಡೆಸಲು ಅನುಮತಿ ನೀಡಿದೆ ಎಂದರು.

ಸಹಕಾರಿ ಸಂಘಗಳ ಚುನಾವಣೆಗೆ ಸರ್ಕಾರ ಒಪ್ಪಿಗೆ- ಸಚಿವ ಎಸ್.ಟಿ.ಸೋಮಶೇಖರ್

50 ಮಂದಿ ಒಳಗೊಂಡಿರುವ ಪದಾಧಿಕಾರಿಗಳ ಚುನಾವಣೆ ಮಾಡಬಹುದು ಎಂದು ಕ್ಯಾಬಿನೆಟ್​​ ತೀರ್ಮಾನವಾಗಿದೆ. ಚುನಾವಣೆ ಯಾವತ್ತಾದರೂ ಮಾಡಬಹುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ನಂತರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ರಾಜ್ಯ ಸಂಪುಟ ಪುನರ್ ರಚನೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಜಿಂದಾಲ್​ಗೆ ಭೂಮಿ ಪರಭಾರೆ ವಿವಾದ: ಪ್ರಮಾಣಪತ್ರ ಸಲ್ಲಿಸದ ಸರ್ಕಾರದ ವಿರುದ್ಧ ಹೈಕೋರ್ಟ್ ಗರಂ

ABOUT THE AUTHOR

...view details