ಕರ್ನಾಟಕ

karnataka

ETV Bharat / state

ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ‌ ಸಚಿವ​ ಹೆಚ್.ವಿಶ್ವನಾಥ್.. - undefined

ಹುಣಸೂರು ತಾಲೂಕಿನ ತಮ್ಮ ನಿವಾಸದಲ್ಲಿ ‌ನಡೆದ ಸಭೆಯಲ್ಲಿ ಮಾಜಿ‌ ಸಚಿವ​ ಹೆಚ್.ವಿಶ್ವನಾಥ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಹೆಚ್.ವಿಶ್ವನಾಥ್

By

Published : Aug 4, 2019, 7:06 PM IST

ಮೈಸೂರು: ತಮ್ಮ ರಾಜಕೀಯ ಕರ್ಮಭೂಮಿಯಲ್ಲಿ ಮಾಜಿ‌ ಸಚಿವ​ ಹೆಚ್.ವಿಶ್ವನಾಥ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಹುಣಸೂರು ತಾಲೂಕಿನ ತಮ್ಮ ನಿವಾಸದಲ್ಲಿ ‌ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಸಾಕಾಗಿದೆ. ಇನ್ನು ಮುಂದೆ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಇದ್ದು ಬೇರೆಯವರಿಗೆ ಸಲಹೆ ಮಾಡುತ್ತೇನೆ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿದರು.

ಮಾಜಿ‌ ಸಚಿವ​ ಹೆಚ್.ವಿಶ್ವನಾಥ್​ ರಾಜಕೀಯ ನಿವೃತ್ತಿ..

ಇತ್ತೀಚೆಗಷ್ಟೆ ರೆಬೆಲ್​ ಬಣದಲ್ಲಿ ಗುರುತಿಸಿಕೊಂಡು ಅನರ್ಹತೆಗೆ ಒಳಪಟ್ಟಿದ್ದ ಮಾಜಿ ಸಚಿವ ಹೆಚ್.ವಿಶ್ವನಾಥ್,​ ತಮ್ಮ ಚುನಾವಣಾ ರಾಜಕೀಯಕ್ಕೆ ಫುಲ್​ ಸ್ಟಾಪ್ ಇಟ್ಟಿರುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ. ಹಾಗಾದ್ರೇ, ಹುಣಸೂರು ಕ್ಷೇತ್ರದಲ್ಲಿ ಯಾರು ಸ್ಪರ್ಧಿಸ್ತಾರೆ ಅನ್ನೋ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನೂ ಅವರು ನೀಡಿಲ್ಲ. ಒಂದು ವೇಳೆ ಅವರ ಮಗನಿಗೆ ಟಿಕೆಟ್ ಕೊಡಿಸಿ ಅದೃಷ್ಟ ಪರೀಕ್ಷೆಗಿಳಿಸ್ತಾರಾ ಅನ್ನೋ ಬಗ್ಗೆಯೂ ಅವರು ಸುಳಿವು ಬಿಟ್ಟುಕೊಟ್ಟಿಲ್ಲ.

For All Latest Updates

TAGGED:

ABOUT THE AUTHOR

...view details