ಕರ್ನಾಟಕ

karnataka

ETV Bharat / state

ವಿವೇಕಾನಂದ ಸ್ಮಾರಕ ನಿರ್ಮಾಣವಾಗದಂತೆ ತಡೆಯಾಜ್ಞೆ ತರುವೆ: ಮಾಜಿ ಮೇಯರ್​ ಪುರುಷೋತ್ತಮ - ಮೈಸೂರು

ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡದಂತೆ ನ್ಯಾಯಾಲಯದಿಂದ ನಾನು ತಡೆಯಾಜ್ಞೆ ತರುತ್ತೇನೆ ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.

Former Mayor Purushottam
ಮಾಜಿ ಮೇಯರ್ ಪುರುಷೋತ್ತಮ್

By

Published : Jun 24, 2021, 2:55 PM IST

ಮೈಸೂರು:ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕಕ್ಕಿಂತ ವಿವೇಕಾನಂದ ಸ್ಮಾರಕ ಸುಂದರವಾಗಿ ಕಾಣಲಿ ಎಂಬ ಉದ್ದೇಶದಿಂದ ರಾಮಕೃಷ್ಣ ಆಶ್ರಮದವರು ಎನ್​​ಟಿಎಂಎಸ್ ಶಾಲೆಯ ಆವರಣದಲ್ಲಿಯೇ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಪಟ್ಟು ಹಿಡಿದಿದ್ದಾರೆ ಎಂದು ಮಾಜಿ ಮೇಯರ್ ಪುರುಷೋತ್ತಮ ಆರೋಪಿಸಿದರು.

ಮಾಜಿ ಮೇಯರ್ ಪುರುಷೋತ್ತಮ ಪ್ರತಿಕ್ರಿಯೆ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್​​ಟಿಎಂಎಸ್ ಶಾಲೆ ಸಮೀಪವೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮಾರಕ ಬೌದ್ಧ ಸ್ತೂಪ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ. ಇದರ ಎದುರು ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡಬೇಕು‌. ಅಂಬೇಡ್ಕರ್ ಸ್ಮಾರಕಕ್ಕಿಂತ ನಮ್ಮ ಸ್ಮಾರಕ ಸುಂದರವಾಗಿ ಕಾಣಲಿ ಎಂಬ ಉದ್ದೇಶದಿಂದ ಶಾಲೆ ಮುಚ್ಚಿದರೂ ಚಿಂತಿಯಿಲ್ಲ ಎಂಬುವುದು ಆಶ್ರಮದವರು ಹಾಗೂ ಭಕ್ತರ ವಿಚಾರವಾಗಿದೆ ಎಂದು ತಿಳಿಸಿದರು.

ಎನ್​​ಟಿಎಂಎಸ್ ಶಾಲೆಗೆ ಸುಮಾರು 120 ವರ್ಷಗಳ ಇತಿಹಾಸವಿದೆ‌. ಶಾಲೆಯ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಸಮೀಕ್ಷೆ ಮಾಡಿ ವರದಿ ಕಳುಹಿಸಿದ್ದರು. ಆದರೆ, ಸರ್ಕಾರ ವರದಿ ಪರಿಶೀಲಿಸದೆ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಅವಕಾಶ ನೀಡಿದೆ‌. ಆದರೆ ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡದಂತೆ ನ್ಯಾಯಾಲಯದಿಂದ ನಾನು ತಡೆಯಾಜ್ಞೆ ತರುತ್ತೇನೆ ಎಂದರು.

ABOUT THE AUTHOR

...view details