ಕರ್ನಾಟಕ

karnataka

ಮೈಸೂರಲ್ಲಿ ಹೆಲಿಟೂರಿಸಂಗೆ ಸಿದ್ದರಾಮಯ್ಯರಿಂದಲೂ ವಿರೋಧ

By

Published : Apr 13, 2021, 7:01 AM IST

ಲಲಿತ ಮಹಲ್​ ಪ್ಯಾಲೇಸ್​ನಲ್ಲಿ ನಿರ್ಮಿಸಲಿರುವ ಹೆಲಿಟೂರಿಸಂಗೆ ಈಗಾಗಲೇ ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ವಿರೋಧ ವ್ಯಕ್ತಪಡಿಸಿದ್ದಾರೆ.

former CM Siddaramaiah opposed, former CM Siddaramaiah opposed to Heli tourism, Mysore heli-tourism, Mysore heli-tourism news, ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ, ಹೆಲಿಟೂರಿಸಂಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ, ಮೈಸೂರು ಹೆಲಿ ಟೂರಿಸಂ, ಮೈಸೂರು ಹೆಲಿ ಟೂರಿಸಂ ಸುದ್ದಿ,
ಹೆಲಿಟೂರಿಸಂಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು:ಲಲಿತ ಮಹಲ್ ಪ್ಯಾಲೇಸ್​ ಬಳಿ ನಿರ್ಮಿಸಲು ಉದ್ದೇಶಿಸಿರುವ ಹೆಲಿ ಟೂರಿಸಂಅನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧಿಸಿದ್ದಾರೆ.

ಹೆಲಿಟೂರಿಸಂಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರಿನಲ್ಲಿ ಹೆಲಿಟೂರಿಸಂಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಮರಗಳನ್ನ ಕತ್ತರಿಸಿ ಹೆಲಿ ಟೂರಿಸಂ ಮಾಡಲು ಸಜ್ಜಾದ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತವಾಗಿದೆ.

ಹೆಲಿಟೂರಿಸಂಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಸಾಮಾಜಿಕ ಜಾಲತಾಣದಲ್ಲಿ 'ಸೇವ್‌ ಮೈಸೂರು' ಹೆಸರಿನಲ್ಲಿ ‘ಮರಗಳನ್ನ ಉಳಿಸಿ.. ಮೈಸೂರು ಉಳಿಸಿ’ ನಡೆಸುತ್ತಿರುವ ಅಭಿಯಾನಕ್ಕೆ ಸಾರ್ವಜನಿಕರು ಉತ್ತಮ ಬೆಂಬಲ ನೀಡುತ್ತಿದ್ದು, ಇದಕ್ಕೆ ಸಿದ್ದರಾಮಯ್ಯ ಕೂಡ ಟ್ವಿಟ್ಟರ್ ಮೂಲಕ ಸಾಥ್ ನೀಡಿದ್ದಾರೆ.

ಮರಗಳನ್ನ ಕತ್ತರಿಸಿ ನೂತನ ಹೆಲಿಪ್ಯಾಡ್ ನಿರ್ಮಿಸಲು ಮುಂದಾಗಿರುವ ಸರ್ಕಾರವು ತನ್ನ ನಿರ್ಧಾರವನ್ನು ವಾಪಸ್ ಪಡೆಯಬೇಕು. ಇದರ ವಿರುದ್ಧ ಸಿಡಿದೆದ್ದಿರುವ ಮೈಸೂರಿನ ಜನತೆ ಜೊತೆ ನಾನು ಇದ್ದೇನೆ ಎಂದು ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ.

ನೂತನ ಹೆಲಿಪ್ಯಾಡ್‌ ಹಾಗೂ ಹೆಲಿ ಟೂರಿಸಂಗಾಗಿ ನಿರ್ಮಿಸಲು ಮರಗಳನ್ನ ಗುರುತು ಮಾಡಿರುವ ಪ್ರವಾಸೋಧ್ಯಮ ಇಲಾಖೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರು ಕಿಡಿಕಾರಿದ್ದಾರೆ‌.

ABOUT THE AUTHOR

...view details