ಮೈಸೂರು: ನಮ್ಮ ಇಲಾಖೆಗೆ ಸಂಬಂಧಿಸಿದ ಮೃಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ 3.50 ಕೋಟಿ ಹಣವನ್ನು ನೀಡಿರುವುದು ಅರಣ್ಯ ಇಲಾಖೆ ಸಚಿವನಾಗಿ ಮಾಡದ ಕೆಲಸವನ್ನು ಅವರು ಮಾಡಿದ್ದಾರೆ. ಇದು ನನಗೆ ಮುಜುಗರ ಉಂಟುಮಾಡಿದೆ ಎಂದು ಆನಂದ್ ಸಿಂಗ್ ತಿಳಿಸಿದ್ದಾರೆ.
ಸಚಿವ ಎಸ್ ಟಿ ಸೋಮಶೇಖರ್ ಕೆಲಸದಿಂದ ನನಗೆ ಮುಜುಗರವಾಗಿದೆ: ಹೀಗೆ ಅಂದಿದ್ದೇಕೆ ಆನಂದ್ ಸಿಂಗ್? - ಅರಣ್ಯ ಸಚಿವ ಆನಂದ ಸಿಂಗ್ ಸುದ್ದಿ
ಚಾಮುಂಡಿ ಬೆಟ್ಟದಲ್ಲಿ ಮುಂದಿನ ವರ್ಷ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದರು. ಈ ವೇಳೆ ತಮ್ಮ ಇಲಾಖೆಗೆ ಸಂಬಂಧಿಸಿದ ಮೃಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ 3.50 ಕೋಟಿ ಹಣವನ್ನು ನೀಡಿರುವುದು ಅರಣ್ಯ ಇಲಾಖೆ ಸಚಿವನಾಗಿ ನನಗೇ ಮುಜುಗರ ಉಂಟುಮಾಡಿದೆ ಎಂದು ಆನಂದ್ ಸಿಂಗ್ ತಿಳಿಸಿದ್ದಾರೆ.

ಸನ್ಮಾನ ಕಾರ್ಯಕ್ರಮ
ಅರಣ್ಯ ಸಚಿವ ಆನಂದ್ ಸಿಂಗ್
ನಂತರ ಮಾತನಾಡಿದ ಅವರು, ಚಾಮುಂಡಿ ಬೆಟ್ಟದ 613 ಹೆಕ್ಟೇರ್ ನಲ್ಲಿರುವ ನೀಲಗಿರಿ ಮರಗಳಲ್ಲಿ 310 ಹೆಕ್ಟೇರ್ ನಷ್ಟು ಮರಗಳನ್ನು ತೆಗೆದು ಇನ್ನೊಂದು ವರ್ಷದಲ್ಲಿ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಸಭೆ ನಡೆಸಿ ನರೇಗಾ ಸಹಕಾರದಿಂದ ಈ ಕೆಲಸ ನಡೆಯಲಿದೆ ಎಂದು ವಿವರಿಸಿದರು.
TAGGED:
forest Minister Anand singh