ಕರ್ನಾಟಕ

karnataka

ETV Bharat / state

ಶಾಲಾ ಖಾತೆಗೆ ಬರಬೇಕಿದ್ದ ಹಣ ಅರಣ್ಯ ಖಾತೆಗೆ! - ಪರಿಸರ ವಿನಾಶ

ಟೆಂಡರ್ ಹಣವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್​ಡಿಎಂಸಿ) ಖಾತೆಗೆ ಹಾಕದೇ, ತನ್ನ ಖಾತೆಗೆ ಅರಣ್ಯ ಇಲಾಖೆ ಹಾಕಿಕೊಂಡಿದೆ..

trees cutting
ಶಾಲಾ ಆವರಣದಲ್ಲಿರುವ ಮರಗಳ ಕಟಾವು

By

Published : Feb 1, 2021, 3:05 PM IST

ಮೈಸೂರು :ಪರಿಸರ ಸಂರಕ್ಷಿಸಬೇಕಾದ ಅರಣ್ಯ ಇಲಾಖೆಯೇ ಅದರ ವಿನಾಶಕ್ಕೆ ಮುಂದಾಗಿದೆ. ಮರಗಳನ್ನು ಕಡಿಯಲು ಟೆಂಡರ್​ ಕರೆದಿರುವ ಇಲಾಖೆ ಅಧಿಕಾರಿಗಳು, ಹೆಚ್ಚುಬೆಲೆಬಾಳುವ ಮರಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಹಾಡಿ ಅರಣ್ಯ ಹಕ್ಕುಗಳ ಸಮಿತಿ ಆರೋಪಿಸಿದೆ.

ಮರಗಳನ್ನು ತುಂಡರಿಸುತ್ತಿರುವುದು

ಹೆಚ್.ಡಿ.ಕೋಟೆ ತಾಲೂಕಿನ ಕೆ.ಎಡೆತೊರೆ ಗ್ರಾಮ ಪಂಚಾಯತ್‌ನ ಪ್ರಭಾನಗರ ಹಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಸಿಲ್ವರ್​​, ನೀಲಗಿರಿ, ನೇರಳೆ, ಬನ್ನಿ‌ ಮರಗಳನ್ನು ಮಾರಾಟ ಮಾಡಲು ಟೆಂಡರ್ ಕರೆದಿತ್ತು.

ಆದರೆ, ಇಲಾಖೆ ಅಧಿಕಾರಿಗಳು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಶಾಲಾ ಆವರಣದಲ್ಲಿ ಮರಗಳ ಕಟಾವು

ಟೆಂಡರ್ ಹಣವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್​ಡಿಎಂಸಿ) ಖಾತೆಗೆ ಹಾಕದೇ, ತನ್ನ ಖಾತೆಗೆ ಅರಣ್ಯ ಇಲಾಖೆ ಹಾಕಿಕೊಂಡಿದೆ.

₹1 ಲಕ್ಷಕ್ಕೂ ಅಧಿಕ ಮೌಲ್ಯದ ಬೆಲೆಬಾಳುವ ಮರಗಳನ್ನು ಕೇವಲ ₹20 (ತಲಾ ಒಂದು ಮರಕ್ಕೆ) ಸಾವಿರಕ್ಕೆ ಗುತ್ತಿಗೆ ನೀಡಿದೆ ಎಂದು ಸಮಿತಿ ಆರೋಪಿಸಿದೆ.

ABOUT THE AUTHOR

...view details