ಕರ್ನಾಟಕ

karnataka

ETV Bharat / state

ಪ್ರವಾಹಪೀಡಿತ ಪ್ರದೇಶಗಳಿಗೆ ಮೈಸೂರಿನ ಸಿಎಫ್​​ಟಿಆರ್​​​ಐನಿಂದ ಆಹಾರ ಪೂರೈಕೆ - For homeless people in the Hemavathi River area of ​​Hassan district

ತೀವ್ರ ಪ್ರವಾಹಕ್ಕೆ ತುತ್ತಾಗಿರುವ ಹಾಸನ ಜಿಲ್ಲೆಯ ಹೇಮಾವತಿ ನದಿ ಪ್ರದೇಶದ ನಿರಾಶ್ರಿತ ಜನರಿಗೆ ರೆಡಿ ಟು ಈಟ್ ಆಹಾರ ಪದಾರ್ಥಗಳನ್ನು ಕಳುಹಿಸುವಂತೆ ಹಾಸನ ಜಿಲ್ಲಾಧಿಕಾರಿಗಳ ಮನವಿಯ ಅನ್ವಯ ಹಾಸನ ಜಿಲ್ಲೆಯಲ್ಲಿ ಪ್ರವಾಹಕ್ಕೆ ತುತ್ತಾದ ಸ್ಥಳಗಳಿಗೆ ಮೈಸೂರಿನ ಸಿಎಫ್​​ಟಿಆರ್​​ಐ ತಂಡ ಊಟ ಕಳುಹಿಸಿದೆ.

ಸಿ.ಎಫ್.ಟಿ.ಆರ್.ಐ

By

Published : Aug 10, 2019, 5:39 PM IST

ಮೈಸೂರು: ಪ್ರವಾಹಕ್ಕೆ ತುತ್ತಾದ ಹಾಸನ ಜಿಲ್ಲೆಯ ಪ್ರದೇಶಗಳಿಗೆ ಸಿಎಫ್​​ಟಿಆರ್​​​​ಐನಿಂದ ರೆಡಿ ಟು ಈಟ್ ಆಹಾರದ ಪ್ಯಾಕೇಟ್​ಗಳನ್ನು ಪರಿಹಾರ ಕೇಂದ್ರಗಳಿಗೆ ಕಳುಹಿಸಲಾಗಿದೆ.

ತೀವ್ರ ಪ್ರವಾಹಕ್ಕೆ ತುತ್ತಾಗಿರುವ ಹಾಸನ ಜಿಲ್ಲೆಯ ಹೇಮಾವತಿ ನದಿ ಪ್ರದೇಶದ ನಿರಾಶ್ರಿತ ಜನರಿಗೆ ರೆಡಿ ಟು ಈಟ್ ಆಹಾರ ಪದಾರ್ಥಗಳನ್ನು ಕಳುಹಿಸುವಂತೆ ಹಾಸನ ಜಿಲ್ಲಾಧಿಕಾರಿಗಳ ಮನವಿ ಅನ್ವಯ ಹಾಸನ ಜಿಲ್ಲೆಯಲ್ಲಿ ಪ್ರವಾಹಕ್ಕೆ ತುತ್ತಾದ ಸ್ಥಳಗಳಿಗೆ ಮೈಸೂರಿನ ಸಿಎಫ್​​ಟಿಆರ್​​ಐ ಚಪಾತಿ, ಟೊಮ್ಯಾಟೋ ಗೊಜ್ಜು ಮತ್ತು ನೀರಿನ ಪ್ಯಾಕೇಟ್​ಗಳನ್ನು ಕಳುಹಿಸಲಾಗಿದ್ದು, ಇದನ್ನು ನೇರವಾಗಿ ಸೇವಿಸಬಹುದು. ಜೊತೆಗೆ 6 ತಿಂಗಳುಗಳ ಕಾಲ ಕೆಡದಂತೆ ಇಡಬಹುದು ಎಂದು ಹಿರಿಯ ವಿಜ್ಞಾನಿ‌ ವಿಜಯಾನಂದ್ ತಿಳಿಸಿದ್ದಾರೆ.

ಸಿ.ಎಫ್.ಟಿ.ಆರ್.ಐ

ಜೊತೆಗೆ ಕರ್ನಾಟಕದಲ್ಲಿ ಪ್ರವಾಹಕ್ಕೆ ತುತ್ತಾದ ಇತರ ಜಿಲ್ಲೆಗಳಿಂದಲೂ ಆಹಾರ ಪದಾರ್ಥಗಳು ಬೇಕು ಎಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಕೋರಿಕೆ‌ ಬಂದರೆ ಅದನ್ನು ಪೂರೈಸಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details