ಕರ್ನಾಟಕ

karnataka

ETV Bharat / state

ಜುಬಿಲಂಟ್​​​​ ಕಾರ್ಖಾನೆ ನೀಡಿದ್ದ ಆಹಾರ ಕಿಟ್ ಬಿಜೆಪಿ ಮುಖಂಡನ ಕಲ್ಯಾಣ ಮಂಟಪದಲ್ಲಿ ಪತ್ತೆ - food kit by jubiliant

ಜುಬಿಲಂಟ್​​ ಕಾರ್ಖಾನೆ ಆಹಾರದ ಕಿಟ್​ಗಳನ್ನು ನೀಡಿದ್ದು, ಈ ಆಹಾರ ಕಿಟ್​ಗಳು ಇನ್ನೂ ಕೂಡಾ ಬಡ ಜನರಿಗೆ ತಲುಪಿಲ್ಲ. ಬದಲಾಗಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀನಿವಾಸರೆಡ್ಡಿ ಅವರ ಕಲ್ಯಾಣಮಂಟಪದಲ್ಲಿ ಪತ್ತೆಯಾಗಿವೆ.

food kit
food kit

By

Published : Jul 23, 2020, 1:05 PM IST

ಮೈಸೂರು: ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ ಜುಬಿಲಂಟ್​​​​​​ ಕಾರ್ಖಾನೆ ಆಹಾರದ ಕಿಟ್ ನೀಡಿದೆ. ಈ ಕಿಟ್​ಗಳು ಬಿಜೆಪಿ ನಗರ ಘಟಕದ ಅಧ್ಯಕ್ಷರ ಕಲ್ಯಾಣಮಂಟಪದಲ್ಲಿ ಪತ್ತೆಯಾಗಿದ್ದು, ಇದು ಚರ್ಚೆಗೆ ಗುರಿಯಾಗಿದೆ.

ಜುಬಿಲಂಟ್​​ ಕಾರ್ಖಾನೆಯಿಂದಾಗಿ ಕೊರೊನಾ ಹಾಟ್​ಸ್ಪಾಟ್ ಆಗಿದ್ದ ನಂಜನಗೂಡು ತಾಲೂಕು, ಕೆಲವೇ ದಿನಗಳಲ್ಲಿ ರೆಡ್​ಝೋನ್​ ಆಗಿ ಹೊರಹೊಮ್ಮಿತ್ತು.

ಕಲ್ಯಾಣ ಮಂಟಪದಲ್ಲಿ ಆಹಾರ ಕಿಟ್ ಪತ್ತೆ

ಆ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ 50,000 ಆಹಾರದ ಕಿಟ್ ನೀಡಬೇಕು ಎಂದು ಜುಬಿಲಂಟ್​ ಕಾರ್ಖಾನೆ ಮತ್ತು ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ನಡುವೆ ಒಪ್ಪಂದವಾಗಿತ್ತು.

ಒಪ್ಪಂದದ ಅನ್ವಯ ಜುಬಿಲಂಟ್​ ಕಾರ್ಖಾನೆ ಆಹಾರ ಕಿಟ್​ಗಳನ್ನು ನೀಡಿದ್ದು, ಈ ಆಹಾರ ಕಿಟ್​ಗಳು ಇನ್ನೂ ಕೂಡಾ ಬಡ ಜನರಿಗೆ ತಲುಪಿಲ್ಲ. ಬದಲಾಗಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀನಿವಾಸರೆಡ್ಡಿ ಅವರ ಕಲ್ಯಾಣಮಂಟಪದಲ್ಲಿ ಪತ್ತೆಯಾಗಿವೆ.

ಇದನ್ನು ರಹಸ್ಯವಾಗಿ ಮುಚ್ಚಿಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಆಹಾರ ಕಿಟ್​ಗಳು ಬಡ ಜನರಿಗೆ ತಲುಪದೇ, ಕಲ್ಯಾಣ ಮಂಟಪದಲ್ಲಿ ಇರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ABOUT THE AUTHOR

...view details