ಕರ್ನಾಟಕ

karnataka

ETV Bharat / state

ರಜನಿಕಾಂತ್​​​​ ಪ್ರಯಾಣ ಬೆಳೆಸಿದ್ದ ವಿಮಾನ 1 ಗಂಟೆ ತಡವಾಗಿ ಮೈಸೂರಿಗೆ... ಕಾರಣ? - ಮೈಸೂರಿಗೆ ಟೂಜೆಟ್ ವಿಮಾನದ ಮೂಲಕ ರಜನಿಕಾಂತ್

ಖಾಸಗಿ ಕಾರ್ಯಕ್ರಮದ ನಿಮಿತ್ತ ಸೂಪರ್​ ಸ್ಟಾರ್​ ರಜನಿಕಾಂತ್​​ ಮೈಸೂರಿಗೆ ಪ್ರಯಾಣ ಬೆಳೆಸಿದ್ದ ವಿಮಾನ ಕೆಟ್ಟ ಹವಾಮಾನದ ಹಿನ್ನೆಲೆ 1 ಗಂಟೆ ತಡವಾಗಿ ಬಂದಿದೆ.

Flight in which Superstar Rajinikanth was travelling is delayed by 1 hour: Reason?
ಸೂಪರ್ ಸ್ಟಾರ್ ರಜನಿಕಾಂತ್ ಪ್ರಯಾಣಿಸುತ್ತಿದ್ದ ವಿಮಾನ 1ಗಂಟೆ ತಡ: ಕಾರಣ?

By

Published : Jan 27, 2020, 12:42 PM IST

ಮೈಸೂರು:ಖಾಸಗಿ ಕಾರ್ಯಕ್ರಮದ ನಿಮಿತ್ತ ಸೂಪರ್​ ಸ್ಟಾರ್​ ರಜನಿಕಾಂತ್​​ ಮೈಸೂರಿಗೆ ಪ್ರಯಾಣ ಬೆಳೆಸಿದ್ದ ವಿಮಾನ ಕೆಟ್ಟ ಹವಾಮಾನದ ಹಿನ್ನೆಲೆ 1 ಗಂಟೆ ತಡವಾಗಿ ಬಂದಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಇಂದು ಚೆನ್ನೈನಿಂದ ಖಾಸಗಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಟೂಜೆಟ್ ವಿಮಾನದ ಮೂಲಕ ಆಗಮಿಸುವಾಗ ಮೈಸೂರು ವಿಮಾನ ನಿಲ್ದಾಣದಲ್ಲಿ ಮಂಜು ಇದ್ದ ಕಾರಣ ವಿಮಾನ ಮೈಸೂರಿನ ವಿಮಾನ ನಿಲ್ದಾಣಕ್ಕೆ 1 ಗಂಟೆ ತಡವಾಗಿ ಬಂದು ಲ್ಯಾಂಡ್​ ಆಗಿದೆ. ನಿಗದಿಯಾಗಿದ್ದ ಸಮಯದ ಪ್ರಕಾರ ಬೆಳಿಗ್ಗೆ 6:50ಕ್ಕೆ ಚೆನ್ನೈನಿಂದ ಹೊರಟು 8:10ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಬರಬೇಕಿತ್ತು. ಆದರೆ 1 ಗಂಟೆ ತಡವಾಗಿ ಆಗಮಿಸಿದೆ.

ಇನ್ನು ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ. ಕೆಟ್ಟ ಹವಾಮಾನದಿಂದಾಗಿ ತಡವಾಗಿದೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ಈಟಿವಿ ಭಾರತ್​ಗೆ ದೂರವಾಣಿ ಮೂಲಕ ಖಚಿತಪಡಿಸಿದ್ದಾರೆ.

ABOUT THE AUTHOR

...view details