ಕರ್ನಾಟಕ

karnataka

ETV Bharat / state

ಮೈಸೂರು: ಕಾರಿನಲ್ಲಿ ದಿಢೀರ್ ಬೆಂಕಿ, ವೈದ್ಯ ಪಾರು - ಪ್ರಾಣಾಪಾಯದಿಂದ ವೈದ್ಯ ಪಾರು

ಮೈಸೂರಿನ ಕುವೆಂಪು ನಗರದ ನಿವಾಸಿಯಾದ ವೈದ್ಯ ಭೂಷಣ್ ಇಂದು ಬೆಳಗ್ಗೆ ಕೆ.ಆರ್.ಆಸ್ಪತ್ರೆಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Sudden fire in car at mysore
ಕಾರಿನಲ್ಲಿ ದಿಢೀರ್ ಬೆಂಕಿ

By

Published : Jan 11, 2022, 7:26 PM IST

Updated : Jan 11, 2022, 7:46 PM IST

ಮೈಸೂರು:ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ಮೈಸೂರಿನ‌ ಗನ್ ಹೌಸ್ ಬಳಿ‌ ನಡೆದಿದೆ. ಕಾರಿನಲ್ಲಿದ್ದ ವೈದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಮೈಸೂರಿನ ಕುವೆಂಪು ನಗರದ ನಿವಾಸಿಯಾದ ವೈದ್ಯ ಭೂಷಣ್ ಅವರು ಬೆಳಗ್ಗೆ ತಮ್ಮ ಕಾರಿನಲ್ಲಿ ಕೆ.ಆರ್. ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಘಟನೆ ನಡಿದಿದೆ. ತಕ್ಷಣ ಅವರು ಕಾರಿನಿಂದಿಳಿದು ನೋಡಿದಾಗ ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಹೋಗಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದ ಕೈಗಾಡಿ, ಬಡ ವ್ಯಾಪಾರಿಯ ಪಪ್ಪಾಯಿ ಹಣ್ಣುಗಳನ್ನು ರಸ್ತೆಗೆಸೆದ ಮಹಿಳೆ

ಕಾರಿನ ಬ್ಯಾಟರಿಯಲ್ಲಾದ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

Last Updated : Jan 11, 2022, 7:46 PM IST

ABOUT THE AUTHOR

...view details