ಮೈಸೂರು: ಕಾರ್ಖಾನೆಗಾಗಿ ಭೂಮಿಯನ್ನು ನೀಡಿದ ರೈತರು, ಇತ್ತ ಭೂಮಿಯನ್ನು ಕಳೆದುಕೊಂಡು ಕೆಲಸವೂ ಇಲ್ಲದೇ ಪರದಾಡುತ್ತಿದ್ದಾರೆ. ಇದೀಗ ರೈತರು ಉದ್ಯೋಗಕ್ಕಾಗಿ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದು, 14ನೇ ದಿನಕ್ಕೆ ಕಾಲಿಟ್ಟಿದೆ.
ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ಬಳಿಯಿರುವ ಏಷ್ಯನ್ ಪೇಂಟ್ಸ್ ಕಾರ್ಖಾನೆಗೆ ಭೂಮಿ ಕೊಟ್ಟ ರೈತ ಕುಟುಂಬಗಳಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿತ್ತು. ಇದೀಗ ಕಾರ್ಖಾನೆ ಉದ್ಯೋಗ ನೀಡದೆ ಸತಾಯಿಸುತ್ತಿದೆ ಎಂದು ಭೂಮಿ ಕೊಟ್ಟ ರೈತರ ಆರೋಪಿಸಿದ್ದಾರೆ. ಕುಟುಂಬ ಸಮೇತ ರೈತ ಸಂಘದ ಬೆಂಬಲದೊಂದಿಗೆ ಕಳೆದ 14 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.