ಕರ್ನಾಟಕ

karnataka

ETV Bharat / state

ಗಂಜಿ ಕೇಂದ್ರದಲ್ಲಿದ್ದ ನೆರೆ ಸಂತ್ರಸ್ತೆಗೆ ವರವಾದ ಈಟಿವಿ ಭಾರತ್ ರಿಪೋರ್ಟ್​: ವಾಪಸ್ ಬಂತು ಪರಿಹಾರ ಚೆಕ್​ - MLA order to return componstion check to Flood victim

ನೆರೆ ಹಾವಳಿ ಸಂದರ್ಭ ಗಂಡನನ್ನು ಕಳೆದುಕೊಂಡು ಗಂಜಿ ಕೇಂದ್ರದಲ್ಲಿದ್ದ ಮಹಿಳೆಗೆ ಸರ್ಕಾರದಿಂದ ನೀಡಲಾದ ಪರಿಹಾರದ ಚೆಕ್​ನ್ನು ಅಧಿಕಾರಿಗಳು ವಾಪಸ್ ಪಡೆದ ಬಗ್ಗೆ ಈಟಿವಿ ಭಾರತ್​ನಲ್ಲಿ ವರದಿ ಪ್ರಸಾರವಾಗಿತ್ತು. ವರದಿಗೆ ಸ್ಪಂದಿಸಿರುವ ಸ್ಥಳೀಯ ಶಾಸಕ ಹರ್ಷವರ್ಧನ್​ ಅವರು ಸಂತ್ರಸ್ತೆಗೆ ಹಣ ವಾಪಸ್ ನೀಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಟಿವಿ ಭಾರತ್ ವರದಿಗೆ ಸ್ಪಂದನೆ

By

Published : Oct 18, 2019, 5:40 PM IST

ಮೈಸೂರು:ನೆರೆ ಹಾವಳಿ ಸಂದರ್ಭದಲ್ಲಿ ಗಂಡನನ್ನು ಕಳೆದುಕೊಂಡಿದ್ದ ಮಹಿಳೆಗೆ ನೀಡಲಾಗಿದ್ದ ಪರಿಹಾರ ಚೆಕ್​ನ್ನು ಅಧಿಕಾರಿಗಳು ವಾಪಸ್ ಪಡೆದ ಘಟನೆ ನಂಜನಗೂಡಿನಲ್ಲಿ ನಡೆದಿತ್ತು. ಈ ಕುರಿತು ಈಟಿವಿ ಭಾರತ್​ನಲ್ಲಿ ವರದಿ ಪ್ರಸಾರವಾಗಿದ್ದ ವರದಿ ಸದ್ದು ಮಾಡಿತ್ತು. ವರದಿಗೆ ಸ್ಪಂದಿಸಿರುವ ಸ್ಥಳೀಯ ಶಾಸಕರು ಸಂತ್ರಸ್ತೆಗೆ ಪುನಃ ಚೆಕ್ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ.

ಪ್ರವಾಹದಲ್ಲಿ ತನ್ನ ಗಂಡನನ್ನು ಕಳೆದುಕೊಂಡು ಗಂಜಿ ಕೇಂದ್ರದಲ್ಲಿದ್ದ ನಂಜನಗೂಡಿನ ಚಂದ್ರಮ್ಮ ಎಂಬುವರಿಗೆ, 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಚೆಕ್​ನ್ನು ಸರ್ಕಾರದ ಪರವಾಗಿ ನೀಡಲಾಗಿತ್ತು. ಆದರೆ ಚೆಕ್ ನೀಡಿದ್ದ ಅಧಿಕಾರಿಗಳು ಮಾರನೇ ದಿನವೇ ಅದನ್ನು ವಾಪಸ್ ಪಡೆದುಕೊಂಡು ಹೋಗಿದ್ದರು. ಇದರಿಂದ ಆತಂಕಗೊಂಡಿದ್ದ ಚಂದ್ರಮ್ಮ, ಕಂಡ ಕಂಡವರ ಬಳಿ ತನಗೆ ನೀಡಿದ್ದ ಚೆಕ್ ವಾಪಸ್ ಪಡೆದ ಅಧಿಕಾರಿಗಳು, 2 ತಿಂಗಳಾದರೂ ಹಿಂತಿರುಗಿಸಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಬಗ್ಗೆ ಅಕ್ಟೋಬರ್ 13ರಂದು ಈಟಿವಿ ಭಾರತ್ ನಲ್ಲಿ ವರದಿ ಪ್ರಸಾರವಾಗಿತ್ತು.

ಹೆಚ್ಚಿನ ಓದಿಗಾಗಿ:ನೀಡಿದ್ದ 5 ಲಕ್ಷ ಪರಿಹಾರದ ಚೆಕ್​​​ ವಾಪಸ್​​​ ಪಡೆದ ಅಧಿಕಾರಿಗಳು: ಸಂಕಷ್ಟದಲ್ಲಿ ಮಹಿಳೆ

ಈ ವರದಿಯನ್ನು ಗಮನಿಸಿದ್ದ ಶಾಸಕ ಹರ್ಷವರ್ಧನ್ ಅವರು, ತಕ್ಷಣ ಈ ಬಗ್ಗೆ ಸ್ಥಳೀಯ ತಹಶಿಲ್ದಾರ್ ಮಹೇಶ್ ಕುಮಾರ್​ರಿಂದ ಮಾಹಿತಿ ಪಡೆದರು. ಅಲ್ಲದೆ, ಚಂದ್ರಮ್ಮನಿಗೆ ಬ್ಯಾಂಕ್ ಖಾತೆ ಮಾಡಿಸಲು ಬೇಕಾದ ಎಲ್ಲಾ ದಾಖಲಾತಿಗಳನ್ನು ಒದಗಿಸಿ, ಅವರಿಗೆ ಬ್ಯಾಂಕ್ ಖಾತೆಯಾದ ನಂತರ ಚೆಕ್ ಹಣವನ್ನು ಆ ಖಾತೆಗೆ ವಾಪಸ್ ನೀಡುವಂತೆ ಸೂಚಿಸಿದ್ದಾರೆ.

ABOUT THE AUTHOR

...view details