ಮೈಸೂರು:ವರದಕ್ಷಿಣೆ ಕಿರುಕುಳ ನೀಡಿ ಗೃಹಿಣಿ ಸಾವಿಗೆ ಕಾರಣವಾಗಿದ್ದ ಆರೋಪದಡಿ ನಾಲ್ವರು ಆರೋಪಿಗಳನ್ನು ಪಿರಿಯಾಪಟ್ಟಣ ಪೋಲಿಸರು ಬಂಧಿಸಿದ್ದಾರೆ. ಆಗಸ್ಟ್ 20ರಂದು ಪಿರಿಯಾಪಟ್ಟಣದ ನಿವಾಸಿ ನಿಶಾ (25) ಎಂಬ ಗೃಹಿಣಿ ನೇಣು ಬಿಗಿದುಕೊಂಡು ಪತಿಯ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಳು.
ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಸಾವು ಆರೋಪ: ನಾಲ್ವರ ಬಂಧನ - Periyapathana Police
ವರದಕ್ಷಿಣೆ ಕಿರುಕುಳ ನೀಡಿ ಗೃಹಿಣಿಯ ಸಾವಿಗೆ ಕಾರಣವಾಗಿರುವ ಆರೋಪದಡಿ ನಾಲ್ವರನ್ನು ಪರಿಯಾಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 20ರಂದು ನಿಶಾ ಎಂಬಾಕೆ ಪತಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು.
![ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಸಾವು ಆರೋಪ: ನಾಲ್ವರ ಬಂಧನ Dowry harassment charges against housewife's death case: four arrested](https://etvbharatimages.akamaized.net/etvbharat/prod-images/768-512-8771870-thumbnail-3x2-mys.jpg)
ಗೃಹಿಣಿ ಸಾವಿಗೆ ವರದಕ್ಷಿಣೆ ಕಿರುಕುಳ ಆರೋಪ: ನಾಲ್ವರ ಬಂಧನ
ಈ ಸಂಬಂಧ ಆಕೆಯ ತಾಯಿ ಇದು ಆತ್ಮಹತ್ಯೆಯಲ್ಲ ಎಂದು ಆರೋಪಿಸಿ ದೂರು ನೀಡಿದ್ದರು. ದೂರು ನೀಡುತ್ತಿದಂತೆ ತಲೆಮರೆಸಿಕೊಂಡಿದ್ದ ಮೃತಳ ಗಂಡ ಪ್ರದೀಪ್, ಮಾವ ಜಯಶೀಲ, ಅತ್ತೆ ಇಂದ್ರಮ್ಮ, ಇಂದ್ರಮಮ್ಮನ ತಂಗಿ ಜ್ಯೋತಿಯನ್ನು ಪೊಲೀಸರು ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.