ಕರ್ನಾಟಕ

karnataka

By

Published : Jan 18, 2021, 5:23 PM IST

ETV Bharat / state

ರಾಮನ ಬದಲು ಶಿವನ ದೇವಾಲಯ ಕಟ್ಟಿದ್ರೆ ಹಣ ಕೊಡುವೆ.. ಪ್ರೊ. ಕೆ ಎಸ್‌ ಭಗವಾನ್‌

ನಾನು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡುವುದಿಲ್ಲ. ಬದಲಾಗಿ ಶಿವನ ದೇವಾಲಯ ನಿರ್ಮಾಣ ಮಾಡಿ ಹಣ ಕೊಡುತ್ತೇನೆ..

ಭಗವಾನ್​ಗೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕರಪತ್ರ
ಭಗವಾನ್​ಗೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕರಪತ್ರ

ಮೈಸೂರು :ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕರಪತ್ರವನ್ನು ಸಾಹಿತಿ ಕೆ ಎಸ್ ಭಗವಾನ್ ಅವರಿಗೆ ನೀಡಲಾಯಿತು.

ರಾಮನ ಬಗ್ಗೆ ಹಲವಾರು ಬಾರಿ ವಿವಾದಾತ್ಮಕ ಹೇಳಿಕೆ ನೀಡಿ ಶ್ರೀರಾಮ ಮಂದಿರ ಏಕೆ ಬೇಡ? ಎಂಬ ಪುಸ್ತಕವನ್ನು ಬರೆದಿರುವ ಸಾಹಿತಿ ಕೆ ಎಸ್ ಭಗವಾನ್ ಮನೆಗೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ತಂಡದ ಇಬ್ಬರು ಸದಸ್ಯರು ಭೇಟಿ ನೀಡಿ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಿಂದೂಗಳಿಂದ ವಂತಿಕೆ ಸಂಗ್ರಹ ಮಾಡುತ್ತಿದ್ದೇವೆ ಎಂಬ ಕರಪತ್ರವನ್ನು ನೀಡಿದ್ದಾರೆ.

ಭಗವಾನ್​ಗೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕರಪತ್ರ

ಇದಕ್ಕೆ ಸಂತೋಷ ವ್ಯಕ್ತಪಡಿಸಿದ ಭಗವಾನ್, ನಾನು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡುವುದಿಲ್ಲ. ಬದಲಾಗಿ ಶಿವನ ದೇವಾಲಯ ನಿರ್ಮಾಣ ಮಾಡಿ ಹಣ ಕೊಡುತ್ತೇನೆ ಎಂದು ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.

For All Latest Updates

TAGGED:

ABOUT THE AUTHOR

...view details