ಕರ್ನಾಟಕ

karnataka

ETV Bharat / state

ಅರುಣ್ ಜೇಟ್ಲಿ ನಿಧನ ಹಿನ್ನೆಲೆ ದಸರಾ ಸಭೆ ರದ್ದು - Dasara meeting

ಅರುಣ್ ಜೇಟ್ಲಿಯವರ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ದಸರಾ ಸಭೆಗಳನ್ನು ಸಚಿವ ವಿ.ಸೋಮಣ್ಣ ಮುಂದೂಡಿದ್ದಾರೆ.

ಅರುಣ್ ಜೇಟ್ಲಿಯವರ ನಿಧನ ಹಿನ್ನೆಲೆ ದಸರಾ ಸಭೆ ರದ್ದು

By

Published : Aug 24, 2019, 5:24 PM IST

ಮೈಸೂರು: ಕೇಂದ್ರದ ಮಾಜಿ‌ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ನಿಧನದ ಹಿನ್ನೆಲೆಯಲ್ಲಿ ಮಧ್ಯಾಹ್ನ ನಡೆಯಬೇಕಿದ್ದ ದಸರಾ ಸಭೆಗಳನ್ನು ಮುಂದೂಡಿ ಸಚಿವ ವಿ.ಸೋಮಣ್ಣ ಬೆಂಗಳೂರಿಗೆ ತೆರಳಿದರು.

ಅರುಣ್ ಜೇಟ್ಲಿಯವರ ನಿಧನ ಹಿನ್ನೆಲೆ ದಸರಾ ಸಭೆ ರದ್ದು

ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರಾ ಪೂರ್ವಭಾವಿ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಚಿವ ವಿ.ಸೋಮಣ್ಣ ಅಧಿಕಾರಿಗಳ ಸಭೆ ಹಾಗೂ ಸಂಜೆ 5 ಗಂಟೆಗೆ ನಡೆಯಬೇಕಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನು ಮೊಟಕುಗೊಳಿಸಿ ನಿಧನರಾದ ಅರುಣ್ ಜೇಟ್ಲಿಯವರಿಗೆ ಸಂತಾಪ ಸೂಚಿಸಿದರು.

ನಂತರ ಬೆಂಗಳೂರಿಗೆ ಹೊರಡುವ ಮುನ್ನ ಸೋಮವಾರ, ಮಂಗಳವಾರ ದಸರಾ ಕಾರ್ಯಕ್ರಮಗಳ ಅಂತಿಮ ರೂಪ ನೀಡುವುದಾಗಿ ಹೇಳಿ ಹೊರಟು ಹೋದರು.

ABOUT THE AUTHOR

...view details