ಮೈಸೂರು :ವಿಶ್ವವಿಖ್ಯಾತ ನಾಡಹಬ್ಬ ಸರಳ ದಸರಾ ಆಚರಣೆಗೆ ಅಭಿಮನ್ಯು ನೇತೃತ್ವದ ವಿಜಯ, ವಿಕ್ರಮ್, ಗೋಪಿ ಮತ್ತು ಕಾವೇರಿ ಮೈಸೂರಿಗೆ ಆಗಮಿಸಿದ್ದು, ಗಜಪಡೆಯನ್ನು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹಾಗೂ ಜಿಲ್ಲಾಡಳಿತದ ವತಿಯಿಂದ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಮನೆಗೆ ಬರಮಾಡಿಕೊಳ್ಳಲಾಯಿತು.
ಅರಮನೆ ಪ್ರವೇಶ ಮಾಡಿದ ಗಜಪಡೆ.. ವಿಡಿಯೋ - ಮೈಸೂರು ಸುದ್ದಿ
ಜಯಮಾರ್ತಾಂಡ ದ್ವಾರದ ಮೂಲಕ ಶುಭ ಧನುರ್ ಲಗ್ನ ಮಧ್ಯಾಹ್ನ 12.18 ರಿಂದ 12.40ರೊಳಗೆ ಅರಮನೆಯೊಳಗೆ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ನಂತರ ಗಾಡ್ ಆಫ್ ಹಾನರ್ ನೀಡುವ ಮೂಲಕ ಗಜಪಡೆಗೆ ಅರಮನೆಗೆ ಸ್ವಾಗತಿಸಲಾಯ್ತು..
![ಅರಮನೆ ಪ್ರವೇಶ ಮಾಡಿದ ಗಜಪಡೆ.. ವಿಡಿಯೋ dasara elephants](https://etvbharatimages.akamaized.net/etvbharat/prod-images/768-512-9022115-thumbnail-3x2-chaii.jpg)
ಗಜಪಡೆ
ಅರಮನೆ ಪ್ರವೇಶ ಮಾಡಿದ ಗಜಪಡೆ
ಜಯಮಾರ್ತಾಂಡ ದ್ವಾರದ ಮೂಲಕ ಶುಭ ಧನುರ್ ಲಗ್ನ ಮಧ್ಯಾಹ್ನ 12.18 ರಿಂದ 12.40ರೊಳಗೆ ಅರಮನೆಯೊಳಗೆ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ನಂತರ ಗಾಡ್ ಆಫ್ ಹಾನರ್ ನೀಡುವ ಮೂಲಕ ಗಜಪಡೆಗೆ ಅರಮನೆಗೆ ಸ್ವಾಗತಿಸಲಾಯಿತು.
ಇಂದಿನಿಂದ 5 ಆನೆಗಳು ಹಾಗೂ ಅದರ ಜೊತೆ ಬಂದ ಕುಟುಂಬದವರು ಜಂಬೂಸವಾರಿಯವರೆಗೆ ಅರಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಬಾರಿ 54 ವರ್ಷದ ಅಭಿಮನ್ಯು ಆನೆ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರಲಿದೆ.