ಕರ್ನಾಟಕ

karnataka

ETV Bharat / state

ಸರಪಳಿ ಕಿತ್ತು ರಂಪಾಟ ಮಾಡಿದ ಅರಮನೆ ಆನೆ ; ವಿಡಿಯೋ - elephant jamini break the chain

ಜಮಿನಿಯನ್ನ ನಿಯಂತ್ರಿಸಲು ಮಾವುತರು, ಕಾವಾಡಿಗರು ಹರಸಾಹಸ ಪಟ್ಟು ಸುಸ್ತಾದರು‌‌‌. ಕೊನೆಗೆ ಕ್ಯಾಪ್ಟನ್ ಅಭಿಮನ್ಯು, ಧನಂಜಯ ಆನೆಗಳ ಮೂಲಕ ಜಮಿನಿ ಆಟಕ್ಕೆ ಅಂಕುಶ ಹಾಕಲಾಯಿತು..

elephant-break-the-chain-in-mysore
ಸರಪಳಿ ಕಿತ್ತು ರಂಪಾಟ ಮಾಡಿದ ಅರಮನೆ ಆನೆ

By

Published : Sep 20, 2021, 7:19 PM IST

ಮೈಸೂರು :ಕಾಲಿಗೆ ಕಟ್ಟಲಾಗಿದ್ದ ಸರಪಳಿಯನ್ನು ಕಿತ್ತುಕೊಂಡಿರುವ ಅರಮನೆಯ ಜಮಿನಿ ಎಂಬ ಆನೆ ರಂಪಾಟ ನಡೆಸಿದೆ. ಪರಿಣಾಮ ಕೆಲಕಾಲ ಮಾವುತರೇ ಬೆಚ್ಚಿಬಿದ್ದಿದ್ದಾರೆ.

ಸರಪಳಿ ಕಿತ್ತು ರಂಪಾಟ ಮಾಡಿದ ಅರಮನೆ ಆನೆ..

ಸರಪಳಿ ಕಿತ್ತುಕೊಂಡ ಹೆಣ್ಣಾನೆ ದಸರಾಗೆ ಬಂದಿರುವ ಆನೆಗಳಿಗೆ ಕೀಟಲೆ ಮಾಡಲು ಮುಂದಾಗಿ ಅತ್ತಿಂದಿತ್ತ ಓಡಾಡಿದೆ. ಇದರಿಂದ ಅರಮನೆ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಜಮಿನಿಯನ್ನ ನಿಯಂತ್ರಿಸಲು ಮಾವುತರು, ಕಾವಾಡಿಗರು ಹರಸಾಹಸ ಪಟ್ಟು ಸುಸ್ತಾದರು‌‌‌. ಕೊನೆಗೆ ಕ್ಯಾಪ್ಟನ್ ಅಭಿಮನ್ಯು, ಧನಂಜಯ ಆನೆಗಳ ಮೂಲಕ ಜಮಿನಿ ಆಟಕ್ಕೆ ಅಂಕುಶ ಹಾಕಲಾಯಿತು.

ಓದಿ:ರಸ್ತೆ ದಾಟುವ ವೇಳೆ ಕಾರಿನಡಿ ಸಿಲುಕಿದರೂ ಬದುಕುಳಿದ ಬಾಲಕ.. ವಿಡಿಯೋ

ABOUT THE AUTHOR

...view details