ಮೈಸೂರು: ಕಳೆದ ಚುನಾವಣೆಯಲ್ಲಿ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಮುಖನೋಡಿ ಹೆಚ್.ವಿಶ್ವನಾಥ್ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೆವು. ಆದರೆ, ಈ ಸಾರಿ ತಕ್ಕ ಪಾಠ ಕಲಿಸುತ್ತೀವಿ ಎಂದು ಯುವಕನೋರ್ವ ಕಾಂಗ್ರೆಸ್ ಸಭೆಯಲ್ಲಿ ಮಾಜಿ ಸಚಿವ ಯು ಟಿ ಖಾದರ್ ಅವರ ಎದುರೇ ಹೇಳಿಕೆ ನೀಡಿದ್ದಾನೆ.
ಬರುವ ಜನವರಿ ತಿಂಗಳಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಇರೋದಿಲ್ಲ.. ಮಾಜಿ ಸಚಿವ ಖಾದರ್ ಭವಿಷ್ಯ - ಮೈಸೂರು ಕಾಂಗ್ರೆಸ್ ಸಭೆ ಹೆಚ್. ವಿಶ್ವನಾಥ್ ವಿರುದ್ಧ ಹೇಳಿಕೆ ಸುದ್ದಿ
ಕಳೆದ ಚುನಾವಣೆಯಲ್ಲಿ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಮುಖನೋಡಿ ಹೆಚ್.ವಿಶ್ವನಾಥ್ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೆವು. ಆದರೆ, ಈ ಸಾರಿ ತಕ್ಕ ಪಾಠ ಕಲಿಸುತ್ತೀವಿ ಎಂದು ಯುವಕನೋರ್ವ ಕಾಂಗ್ರೆಸ್ ಸಭೆಯಲ್ಲಿ ಮಾಜಿ ಸಚಿವ ಯು ಟಿ ಖಾದರ್ ಅವರ ಎದುರೇ ಹೇಳಿಕೆ ನೀಡಿದ್ದಾನೆ.
![ಬರುವ ಜನವರಿ ತಿಂಗಳಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಇರೋದಿಲ್ಲ.. ಮಾಜಿ ಸಚಿವ ಖಾದರ್ ಭವಿಷ್ಯ](https://etvbharatimages.akamaized.net/etvbharat/prod-images/768-512-5167905-thumbnail-3x2-congress.jpg)
ಮೈಸೂರು ಕಾಂಗ್ರೆಸ್ ಪ್ರಚಾರ ಸಭೆ
ಮೈಸೂರು ಕಾಂಗ್ರೆಸ್ ಪ್ರಚಾರ ಸಭೆ..
ಬನ್ನಿಕುಪ್ಪೆಯಲ್ಲಿ ನಡೆದ ಮಾಜಿ ಸಚಿವ ಯು ಟಿ ಖಾದರ್ ನೇತೃತ್ವದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಹೆಚ್.ವಿಶ್ವನಾಥ್ ಗೆಲ್ಲಲ್ಲು ಅವಕಾಶವಿರಲಿಲ್ಲ. ಆದರೆ, ಜೆಡಿಎಸ್ ವರಿಷ್ಠರ ಮುಖನೋಡಿ ಗೆಲ್ಲಿಸಿದ್ದೆವು. ಆದರೆ, ಗೆದ್ದ ನಂತರ ಒಮ್ಮೆಯೂ ಇತ್ತ ಕಡೆ ತಿರುಗಿ ನೋಡಿಲ್ಲವೆಂದು ಅಸಮಾಧಾನ ಹೊರಹಾಕಿದರು. ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಖಾದರ್ಗೆ ಭರವಸೆ ನೀಡಿದರು. ಈ ವೇಳೆಯಲ್ಲಿ ಯು ಟಿ ಖಾದರ್ ಮಾತನಾಡಿ, ಜನವರಿ ತಿಂಗಳನಲ್ಲಿ ಬಿಜೆಪಿ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು.