ಕರ್ನಾಟಕ

karnataka

By

Published : Jun 11, 2019, 2:14 PM IST

ETV Bharat / state

ಗಡಿ ದಾಟಿದ ಚಿರತೆಗಳು: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಚಿರತೆಗಳು ಗಡಿ ಭಾಗ ದಾಟುತ್ತಿರುವ ದೃಶ್ಯಗಳು ವೈರಲ್​ ಆಗಿದ್ದು, ಜನರ ಆತಂಕ ಹೆಚ್ಚಾಗಲು ಕಾರಣ ಎನ್ನಲಾಗಿದೆ.

ಚಿರತೆಗಳು

ಮೈಸೂರು:ಎರಡು ಚಿರತೆಗಳು ಚೆಕ್ ಪೋಸ್ಟ್ ದಾಟಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಸಿಸಿ ಟಿವಿಯಲ್ಲಿ ಸೆರೆಯಾದ ಚಿರತೆಗಳು

ಚಿರತೆಗಳು ಮೈಸೂರು - ಕೇರಳ ಗಡಿಭಾಗವಾಗಿರುವ ಬಾವಲಿ ಚೆಕ್ ಪೋಸ್ಟ್​ ದಾಟಿ ಹೋಗುತ್ತಿರುವ ವಿಡಿಯೋ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ. ಒಂದರ ಹಿಂದೆ ಮತ್ತೊಂದು ಹೆಜ್ಜೆ ಹಾಕಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರಲ್ಲಿ ಬ್ಲಾಕ್ ಪ್ಯಾಂಥರ್​ ಚಿರತೆಯೊಂದು ಇದೆ. ಈ ಚಿರತೆಗಳು ಗಡಿ ಭಾಗ ದಾಟಿರುವ ಕಾರಣ ನಾಡಿನತ್ತ ಲಗ್ಗೆ ಇಡುವ ಸಾಧ್ಯತೆ ಹೆಚ್ಚಿದೆ. ಇದು ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ABOUT THE AUTHOR

...view details