ಕರ್ನಾಟಕ

karnataka

ETV Bharat / state

ನಕಲಿ ಬಿಲ್ ಸೃಷ್ಟಿ: ಇಬ್ಬರು ಎಂಜಿನಿಯರ್​ಗಳು ಅಮಾನತು - etv bharatha, kannada news, bogus bill, mysore, suspend engineers

ಬೋಗಸ್ ಬಿಲ್​ ಸೃಷ್ಟಿಸಿದ ಆರೋಪದಡಿ ಇಬ್ಬರು ಎಂಜಿನಿಯರಿಂಗ್​ಗಳ ಅಮಾನತು ಬಳಿಕ ಇನ್ನೂ ಹಲವರ ಮೇಲೆ ಶಂಕೆ ವ್ಯಕ್ತವಾದ ಪರಿಣಾಮ ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಪಾಲಿಕೆ ಕಚೇರಿ

By

Published : Jun 5, 2019, 2:30 PM IST

ಮೈಸೂರು: ರಸ್ತೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಪಾಲಿಕೆಯ ಬೊಕ್ಕಸದಿಂದಕೋಟ್ಯಾಂತರ ರೂಪಾಯಿ ಸೋರಿಕೆಗೆ ಕಾರಣವಾದ ಆರೋಪದ ಮೇಲೆ ಇಬ್ಬರು ಎಂಜಿನಿಯರ್​ಗಳನ್ನು ಅಮಾನತು ಮಾಡಲಾಗಿದೆ.

ಮೈಸೂರು ಮಹಾನಗರ ಪಾಲಿಕೆ ಕಚೇರಿ

ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಂ.ಜಿ.ರಸ್ತೆಯಲ್ಲಿ ಡಾಂಬರೀಕರಣ ಸಂಬಂಧ ₹ 1.10 ಕೋಟಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ದೂರನ್ನು ಎಸಿಬಿಗೆ ನೀಡಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳು ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುನಿಲ್ ಬಾಬು ಹಾಗೂ ಕಿರಿಯ ಎಂಜಿನಿಯರ್ ಎಂ.ವಿ.ಮೋಹನಕುಮಾರಿ ಎಂಬವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಈ ಕಾಮಗಾರಿ ನಡೆಸಿದ ಪ್ರಥಮ ದರ್ಜೆ ಗುತ್ತಿಗೆದಾರ ಕರೀಗೌಡ ಎಂಬುವರನ್ನು ಕಪ್ಪು ಪಟ್ಟಿಗೆ ಸೇರಿಸಲು ತಿರ್ಮಾನಿಸಲಾಗಿದ್ದು, ಪ್ರಕರಣದಲ್ಲಿ ಇನ್ನೂ ಹಲವರ ಮೇಲೆ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ ಎನ್ನಲಾಗಿದೆ.

ABOUT THE AUTHOR

...view details