ಕರ್ನಾಟಕ

karnataka

ETV Bharat / state

ಶಾಸಕರ ಬ್ಲಾಕ್ ಮೇಲ್ - ಹಣಕ್ಕೆ ಬೇಡಿಕೆ ಇಟ್ಟ ಪತ್ರಕರ್ತ, ವೈದ್ಯನ ಬಂಧನ

ಶಾಸಕರೊಬ್ಬರನ್ನು ಹೆದರಿಸಲು ಬಂದ ವರದಿಗಾರನೋರ್ವನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಐವರು ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

By

Published : Apr 19, 2019, 4:09 PM IST

ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಾಮದಾಸ್

ಮೈಸೂರು: ಮಾನಹಾನಿ ವರದಿ ಪ್ರಕಟಿಸುತ್ತೇವೆ ಎಂದು ಶಾಸಕರೊಬ್ಬರನ್ನು ಹೆದರಿಸಲು ಬಂದ ವರದಿಗಾರನೊಬ್ಬನನ್ನು ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ.

ಇಂದು ಖಾಸಗಿ ಹೋಟೆಲ್​​ನಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ ರಾಮದಾಸ್, ತಮ್ಮ ಬಗ್ಗೆ ಮಾನಹಾನಿ ವರದಿ ಪ್ರಕಟಿಸುವ ಸಂಬಂಧ ಕಳೆದ 1 ವಾರದಿಂದ ಪತ್ರಿಕಾ ಸಂಪಾದಕ ಹಾಗೂ ವರದಿಗಾರ ಸೇರಿದಂತೆ ಹಲವು ವ್ಯಕ್ತಿಗಳು ಸ್ಥಳೀಯ ವೈದ್ಯರ ಮೂಲಕ 25 ಲಕ್ಷ ರೂ. ನೀಡುವಂತೆ ನನ್ನನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಾಮದಾಸ್

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿಲಾಗಿದ್ದು, ಇದರಲ್ಲಿ ಓರ್ವ ಜಾಮೀನು​ ಪಡೆದು ಹೊರಬಂದಿದ್ದಾನೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನು ಐವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಕುವೆಂಪು ನಗರ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ ಎಂದು ಶಾಸಕ ರಾಮದಾಸ್ ತಿಳಿಸಿದರು. ಈ ಬಗ್ಗೆ ತಮ್ಮ ಸಹಾಯಕ ಮುದ್ದುಕೃಷ್ಣ ಎಂಬವರ ಮೂಲಕ ಶಾಸಕರು ಕುವೆಂಪು ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ABOUT THE AUTHOR

...view details