ಮೈಸೂರು: ಚುನಾವಣೆಯ ನಂತರ ಸರ್ಕಾರವನ್ನು ಕಿತ್ತು ಹಾಕೋಕೆ ಅದೇನು ಗೋಲಿ ಆಟವೇ? ಬಿಜೆಪಿ ಅವರಿಗೆ ಸೆನ್ಸ್ ಇಲ್ಲ ಎಂದು ಸಿದ್ದರಾಮಯ್ಯ, ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇಂದು ಅವರ ಮನೆಯ ಹತ್ತಿರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಚುನಾವಣೆಯ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಪದೇ ಪದೇ ಹೇಳುವ ಬಗ್ಗೆ ಕೋಪದಿಂದಲೇ ಪ್ರತಿಕ್ರಿಯಿಸಿದದರು. ಯಡಿಯೂರಪ್ಪ ಎಷ್ಟು ದಿನಗಳಿಂದ ಇದೇ ರೀತಿ ಹೇಳಿಕೊಂಡು ಬರುತ್ತಿದ್ದಾರೆ. ನನಗಿಂತ ಮೊದಲಿಂದಲೂ ಈ ರೀತಿ ಹೇಳಿಕೊಂಡು ಬರುತ್ತಿದ್ದಾರೆ. ಅವರ ಕೈಯಲ್ಲಿ ಸರ್ಕಾರವನ್ನು ಕಿತ್ತು ಹಾಕಲು ಆಗಿದೆಯಾ? ಅದೇನು ಗೋಲಿ ಆಟವೇ? ಅವರಿಗೆ ಸೆನ್ಸ್ ಇಲ್ಲ ಅಷ್ಟೇ. ಮೂವತ್ತು ಕೋಟಿ ಖರ್ಚು ಮಾಡಿ ಎಂಎಲ್ಎಗಳನ್ನು ಕೊಂಡುಕೊಳ್ಳಲು ಆಗುತ್ತಾ? ಬಿಜೆಪಿ ಅವರಿಗೆ ಮಾನ ಮಾರ್ಯಾದೆ ಇಲ್ಲ. ಬುದ್ಧಿನೂ ಇಲ್ಲ. ಅದೊಂದು ಪೊಲಿಟಿಕಲ್ ಪಾರ್ಟಿನಾ, ಅವರೊಬ್ಬ ಲೀಡರಾ ಎಂದು ಬಿಜೆಪಿ ಮೇಲೆ ಹರಿಹಾಯ್ದಿದ್ದಾರೆ.
ಲೋಕಸಭೆ ಗೆದ್ದರೆ ನನ್ನ ರಾಜಕೀಯ ಮುಗಿಯುತ್ತದೆ ಎಂಬ ಯಡಿಯೂರಪ್ಪರ ಹೇಳಿಕೆಗೆ ಪ್ರತಿಕ್ತಿಯಿಸಿ, ಅವರು ಏನಾದರೂ ಮಾತನಾಡಲಿ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಜನರು ಬುದ್ಧಿವಂತರಿದ್ದಾರೆ. ಅವರಿಗೆ ಇವರು ಮಾಡುತ್ತಿರುವ ಯೋಜನೆಗಳ ಬಗ್ಗೆ ಅರಿವಿದೆ. ನಾವು ತಿಳಿದುಕೊಂಡಿದ್ದೀವಿ ಅವರು ಪದ್ದರು ಅಂತ. ನಮಗಿಂತ ಬುದ್ಧಿವಂತರು ಅವರು ಎಂದರು.