ಕರ್ನಾಟಕ

karnataka

ETV Bharat / state

ವರುಣಾದಲ್ಲಿ ಸಿದ್ದರಾಮಯ್ಯ ರೌಂಡ್ಸ್​ ಎಫೆಕ್ಟ್: ಟಿಕೆಟ್​ಗಾಗಿ ಬಿಜೆಪಿ ಮುಖಂಡರ ಸಭೆ - Madeshwara temple

ಸಿದ್ದರಾಮಯ್ಯರಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಒತ್ತಾಯ ಇರುವಂತೆಯೇ ವರುಣಾದಲ್ಲಿಯೂ ಕೂಡ ಒತ್ತಾಯವಿದೆ. ಸಿದ್ದರಾಮಯ್ಯರ ವಿರುದ್ಧ ತೊಡೆತಟ್ಟಲು ವರುಣಾ ಕ್ಷೇತ್ರದ ಮುಖಂಡರೇ ವೇದಿಕೆ ನಿರ್ಮಿಸಿಕೊಳ್ಳುತ್ತಿದ್ದಾರೆ.

ಟಿಕೆಟ್​ಗಾಗಿ ಸಭೆ ಸೇರಿದ ಬಿಜೆಪಿ ಮುಖಂಡರು
ಟಿಕೆಟ್​ಗಾಗಿ ಸಭೆ ಸೇರಿದ ಬಿಜೆಪಿ ಮುಖಂಡರು

By

Published : Dec 12, 2022, 9:51 PM IST

Updated : Dec 12, 2022, 10:19 PM IST

ಬಿಜೆಪಿ ಟಿಕೆಟ್​ ಆಕಾಂಕ್ಷಿ ಬಿ ಎನ್ ಸದಾನಂದ ಮಾತನಾಡಿದರು.

ಮೈಸೂರು:ವಿಧಾನಸಭೆಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದಿನ್ನೂ ಖಚಿತವಾಗಿಲ್ಲ. ಆದರೆ, ಈಗಾಗಲೇ ಎರಡು ದಿನ ವರುಣಾ ಕ್ಷೇತ್ರದಲ್ಲಿ ಅವರು ರೌಂಡ್ಸ್​ ಹಾಕಿದ್ದರಿಂದ ಆ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ತಯಾರಿ ನಡೆಸುತ್ತಿದೆ.

ಸಿದ್ದರಾಮಯ್ಯರಿಗೆ ಬೇರೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಾಯ ಇರುವಂತೆ ವರುಣಾದಲ್ಲಿಯೂ ಕೂಡ ಒತ್ತಾಯವಿದೆ. ಸಿದ್ದರಾಮಯ್ಯರ ವಿರುದ್ಧ ತೊಡೆತಟ್ಟಲು ವರುಣಾ ಕ್ಷೇತ್ರದ ಮುಖಂಡರೇ ವೇದಿಕೆ ನಿರ್ಮಿಸಿಕೊಳ್ಳುತ್ತಿದ್ದಾರೆ. ವರುಣಾ ವ್ಯಾಪ್ತಿಯಲ್ಲಿರುವ ಹದಿನಾರು ಗ್ರಾಮದಲ್ಲಿರುವ ಮಾದೇಶ್ವರ ದೇವಾಲಯದಲ್ಲಿ ಸಭೆ ನಡೆಸಿದ ಕ್ಷೇತ್ರದ ಬಿಜೆಪಿ ಮುಖಂಡರು ಈ ಬಾರಿ ಶತಾಯಗತಾಯ ವರುಣಾದಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಪಣತೊಟ್ಟಿದ್ದಾರೆ‌.

ಬಿಜೆಪಿ ಬಾವುಟ ಹಾರಿಸಲು ಬಿಗಿಪಟ್ಟು: ಬಿಜೆಪಿ ಸ್ವಾಭಿಮಾನ ಆತ್ಮಾವಲೋಕನ ಸಭೆ ಮೂಲಕ ಎಲ್ಲಾ ಆಕಾಂಕ್ಷಿಗಳು ಒಂದೇ ವೇದಿಕೆಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಬಿಜೆಪಿ ಪ್ರಬಲ ಆಕಾಂಕ್ಷಿಗಳಾದ ಬಿ ಎನ್ ಸದಾನಂದ, ಶರತ್ ಪುಟ್ಟಬುದ್ಧಿ, ಬಿ ಶಿವಣ್ಣ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಸಭೆ ನಡೆದಿದ್ದು, ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಒಗ್ಗಟ್ಟಿನಿಂದ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಎಂದು ಬಿಗಿಪಟ್ಟು ಹಿಡಿದಿದ್ದಾರೆ. ಒಗ್ಗಟ್ಟಿನ ಮಂತ್ರ ಜಪಿಸಿದ ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸು: ಸಿದ್ದರಾಮಯ್ಯ

Last Updated : Dec 12, 2022, 10:19 PM IST

ABOUT THE AUTHOR

...view details