ಕರ್ನಾಟಕ

karnataka

ETV Bharat / state

ಮೈಸೂರು ಕಾಂಗ್ರೆಸ್ ಕಚೇರಿ ಬಳಿ ನೂಕು ನುಗ್ಗಲು - ಬಿಜೆಪಿ ಕಾರ್ಯಕರ್ತರ ಬಂಧನ! - Discussion on Mysore development

ಮೈಸೂರು ಅಭಿವೃದ್ಧಿ ಚರ್ಚೆ ಸಲುವಾಗಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಆಗಮಿಸುತ್ತಿದ್ದಾಗ ಮೆಟ್ರೋಪೋಲ್ ವೃತ್ತದ ಬಳಿಯೇ ಬಿಜೆಪಿ ಕಾರ್ಯಕರ್ತರನ್ನು ತಡೆದು ಪೊಲೀಸರು ಬಂಧಿಸಿದ್ದಾರೆ.

BJP activists arrested in Mysore who came to congress office
ಮೈಸೂರು ಬಿಜೆಪಿ ಕಾರ್ಯಕರ್ತರ ಬಂಧನ

By

Published : Jun 29, 2022, 11:55 AM IST

Updated : Jun 29, 2022, 12:14 PM IST

ಮೈಸೂರು: ಮೈಸೂರು ಅಭಿವೃದ್ಧಿ ವಿಚಾರವಾಗಿ ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ಚರ್ಚೆ ವಿಷಯ ಭಾರಿ ಸುದ್ದಿಯಲ್ಲಿದೆ. ಕಾಂಗ್ರೆಸ್ ಕಚೇರಿ ಹಾಗೂ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಬಿಜೆಪಿ ಕಾರ್ಯಕರ್ತರ ಬಂಧನ!

ಮೈಸೂರು ಅಭಿವೃದ್ಧಿ ವಿಚಾರದಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಸಂಸದ ಪ್ರತಾಪ್ ಸಿಂಹ ಅವರಿಗೆ ಪಂಥಾಹ್ವಾನ ನೀಡಿರುವ ಹಿನ್ನೆಲೆಯಲ್ಲಿ, ಬಿಜೆಪಿ ಕಾರ್ಯಕರ್ತರು ಕೂಡ ಲಕ್ಷ್ಮಣ್​ಗೆ ಚರ್ಚೆ ಮಾಡಲು ಪಂಥಾಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಆಗಮಿಸುತ್ತಿದ್ದಾಗ ಮೆಟ್ರೋಪೋಲ್ ವೃತ್ತದ ಬಳಿಯೇ ಬಿಜೆಪಿ ಕಾರ್ಯಕರ್ತರನ್ನು ತಡೆದು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಬಹಿರಂಗ ಚರ್ಚೆಗೆ ಬನ್ನಿ.. ಸಿದ್ದರಾಮಯ್ಯ, ಮಹಾದೇವಪ್ಪಗೆ ಸಂಸದ ಪ್ರತಾಪ ಸಿಂಹ ಪಂಥಾಹ್ವಾನ

Last Updated : Jun 29, 2022, 12:14 PM IST

ABOUT THE AUTHOR

...view details