ಕರ್ನಾಟಕ

karnataka

By

Published : Jul 21, 2022, 6:32 PM IST

ETV Bharat / state

ಮೈಸೂರಲ್ಲಿ ಶೋಕಿಗಾಗಿ ಬುಲೆಟ್ ಬೈಕ್​ ಕದಿಯುತ್ತಿದ್ದ ಚಾಲಾಕಿಗಳು.. ಇಬ್ಬರು ಆರೋಪಿಗಳು ಅಂದರ್​

ಶೋಕಿಗಾಗಿ ಬುಲೆಟ್​ ಮೇಲೆ ಕಣ್ಣು.. 14 ದ್ವಿಚಕ್ರ ವಾಹನಗಳು ವಶಕ್ಕೆ-​ ಇಬ್ಬರು ಆರೋಪಿಗಳ ಬಂಧನ

ಶೋಕಿಗಾಗಿ ಬುಲೆಟ್ ಬೈಕ್​ಗಳನ್ನೇ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ
ಶೋಕಿಗಾಗಿ ಬುಲೆಟ್ ಬೈಕ್​ಗಳನ್ನೇ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ

ಮೈಸೂರು:ಬುಲೆಟ್ ಬೈಕ್​ಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿ ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುವೆಂಪು ನಗರದ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಲ್ಲದೇ, ಬಂಧಿತರಿಂದ 15 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಏಪ್ರಿಲ್ 3 ರಂದು ಶ್ರೀರಾಮ್​ಪುರ ಬಡಾವಣೆಯಲ್ಲಿ ಬುಲೆಟ್ ಬೈಕ್ ಕಳ್ಳತನವಾದ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ಅದರನ್ವಯ ಜುಲೈ 15 ರಂದು ಕುವೆಂಪು ನಗರದ ಪೊಲೀಸರು ಕಾರ್ತಿಕ್ ನಾಯಕ್‌ ಮತ್ತು ಕಿರಣ್‌ ಕೆ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇವರಿಬ್ಬರು ಹೆಚ್ಚಾಗಿ ಬುಲೆಟ್ ಬೈಕ್​​ಗಳನ್ನೇ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಿರುವುದು ತಿಳಿದಿದೆ. ಶೋಕಿ ಜೀವನ ನಡೆಸಲು ಈ ಕೃತ್ಯ ಎಸಗುತ್ತಿದ್ದರು ಎಂಬುದು ಗೊತ್ತಾಗಿದೆ.

ಆರೋಪಿಗಳಿಂದ ಒಟ್ಟು 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ 9 ರಾಯಲ್‌ ಎನ್‌ಫೀಲ್ಡ್ ಬುಲೆಟ್ ಬೈಕ್​ಗಳಾಗಿದ್ದು, 3 ಹೋಂಡಾ ಆಕ್ಟಿವಾ ಸ್ಕೂಟರ್‌ಗಳು, 1 ಬಜಾಜ್ ಪಲ್ಸರ್ ಬೈಕ್, 1 ಯಮಹಾ ಆ‌ರ್15 ಬೈಕ್​ಗಳಾಗಿವೆ. ಜೊತೆಗೆ 11 ಸಾವಿರ ರೂ. ಮೌಲ್ಯದ 2 ಮೊಬೈಲ್‌ಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಓದಿ:ಹೊಸಕೋಟೆಯಲ್ಲಿ ಅಪಾರ್ಟ್‌ಮೆಂಟ್ ಗೋಡೆ ಕುಸಿದು ನಾಲ್ವರು ಕಾರ್ಮಿಕರು ದುರ್ಮರಣ

ABOUT THE AUTHOR

...view details