ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳಲು 2 ವರ್ಷ ಬೇಕು : ನಾರಾಯಣಗೌಡ

ಮೈಸೂರು ನಗರದಲ್ಲಿ ಹಾಗೂ ಜಿಲ್ಲೆಯಲ್ಲಿ 1500 ಹೋಟೆಲ್, ರೆಸ್ಟೋರೆಂಟ್, ಬೇಕರಿ, ಲಾಡ್ಜ್​ಗಳಿವೆ. 25 ಸಾವಿರ‌ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಈಗ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಪರಿಹಾರ ನೀಡಬೇಕು..

By

Published : Jun 8, 2021, 9:10 PM IST

narayana gowda
ಮೈಸೂರು ಹೋಟೆಲ್​ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ

ಮೈಸೂರು :ಎರಡನೇ ಅಲೆಯ ಕೋವಿಡ್ ಲಾಕ್‌ಡೌನ್‌ನಿಂದ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದೆ. ಚೇತರಿಸಿಕೊಳ್ಳಲು ಕನಿಷ್ಠ 2 ವರ್ಷ ಬೇಕು ಎಂದು ಜಿಲ್ಲಾ ಹೋಟೆಲ್​ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.

ಮೈಸೂರು ಹೋಟೆಲ್​ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ..

ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ನಂಬಿ ಬದುಕುವ ನಗರ ಎಂದರೇ ಅದು ಸಾಂಸ್ಕೃತಿಕ ನಗರಿ ಮೈಸೂರು. ಇಲ್ಲಿಗೆ ಪ್ರತಿ ವರ್ಷ 35 ಲಕ್ಷಕ್ಕೂ ಹೆಚ್ಚಿನ ಜನ ಪ್ರವಾಸಿಗರು ಆಗಮಿಸುತ್ತಾರೆ. ಇವರ ಮೇಲೆ ಮೈಸೂರಿನ 2 ಲಕ್ಷಕ್ಕೂ ಹೆಚ್ಚು ಜನ ಅವಲಂಬಿತರಾಗಿದ್ದಾರೆ.

ಕೋವಿಡ್ 2ನೇ ಅಲೆ ಪ್ರವಾಸೋದ್ಯಮಕ್ಕೆ ತೀರಾ ಪೆಟ್ಟುಕೊಟ್ಟಿದೆ. ಇದರಿಂದ ಹೋಟೆಲ್​ಗಳ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಮೈಸೂರು ನಗರದಲ್ಲಿ ಮತ್ತು ಜಿಲ್ಲೆಗಳಲ್ಲಿ 10 ಸಾವಿರ ಲಾಡ್ಜ್ ರೂಂಗಳಿವೆ. ಪ್ರತಿ ದಿನ ಈಗ ಶೇ.5ರಷ್ಟು ರೂಂಗಳು ಸಹ ಬುಕ್ ಆಗುತ್ತಿಲ್ಲ.

ಮೈಸೂರು ನಗರದಲ್ಲಿ ಹಾಗೂ ಜಿಲ್ಲೆಯಲ್ಲಿ 1500 ಹೋಟೆಲ್, ರೆಸ್ಟೋರೆಂಟ್, ಬೇಕರಿ, ಲಾಡ್ಜ್​ಗಳಿವೆ. 25 ಸಾವಿರ‌ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಈಗ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಪರಿಹಾರ ನೀಡಬೇಕು.

ಹೋಟೆಲ್ ತೆರಿಗೆಗಳನ್ನು ರದ್ದು ಮಾಡಿ ಸೌಲಭ್ಯ ನೀಡಬೇಕೆಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸಿ ಎಂ ಉದಾಸಿ ನಿಧನ: ಹಾನಗಲ್​ನ ರುದ್ರಭೂಮಿಯಲ್ಲಿ ನಾಳೆ ಅಂತ್ಯಕ್ರಿಯೆ

ABOUT THE AUTHOR

...view details