ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪಿಗಳನ್ನು ಗಲ್ಲಿಗೇರಿಸಿ ಎಂದು ಗೋಡೆಗಳ ಮೇಲೆ 'RAPE' ಬರಹದಲ್ಲಿ ಕಲಾವಿದರು ಜಾಗೃತಿ ಮೂಡಿಸಿದ್ದಾರೆ.
ಮೈಸೂರಿನ ರವಿವರ್ಮ ಆರ್ಟ್ ಕಾಲೇಜಿನ ವಿದ್ಯಾರ್ಥಿಗಳಾದ ರಾಹುಲ್ ಮನೋಹರ ಹಾಗೂ ಸುಮಂತ್ ಗೌಡ ಅವರು ಈ ರೀತಿ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ. ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯ ಪಾಳು ಗೋಡೆ ಮೇಲೆ ರೇಪ್ ಎಂಬುದಾಗಿ ಬರೆದು, ಆ ಅಕ್ಷರಗಳಿಗೆ ಆರೋಪಿಗಳನ್ನು ನೇಣು ಹಾಕಿರುವ ಚಿತ್ರ ಬಿಡಿಸಿದ್ದಾರೆ. ಆ ಚಿತ್ರದ ಮೂಲಕ ಮಹಿಳೆಯರ ರಕ್ಷಣೆ ಮಾಡಿ ಎಂದು ಸಂದೇಶ ಸಾರಿದ್ದಾರೆ.