ಕರ್ನಾಟಕ

karnataka

ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದು ತಪ್ಪು, ಸಮುದಾಯ ಭವನ ಯಾರಪ್ಪನ ಮನೆ ಸ್ವತ್ತಲ್ಲ: ನಾರಾಯಣಗೌಡ

By

Published : Apr 26, 2020, 6:32 PM IST

ಶ್ರೀಕಂಠೇಗೌಡರದು ಆಡಂಬರ ಹಾಗೂ ಪ್ರಚಾರದ ಬದುಕು. ಅವರಿಗೆ ಇಷ್ಟು ದಿನ ಪ್ರಚಾರ ಸಿಕ್ಕಿಲ್ಲ. ಅದಕ್ಕೆ ಈ ರೀತಿಯಾದ್ರು ಪ್ರಚಾರ ಪಡೆದುಕೊಳ್ಳೋಣ ಎಂದು ರಾಜಕಾರಣ ಮಾಡ್ತಿದ್ದಾರೆ ಎಂದು ಹೇಳುವ ಮೂಲಕ ತೋಟಗಾರಿಕೆ ಸಚಿವ ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ.

ತೋಟಗಾರಿಕೆ ಸಚಿವ ತೋಟಗಾರಿಕೆ ಸಚಿವ ನಾರಾಯಣಗೌಡನಾರಾಯಣಗೌಡ
ತೋಟಗಾರಿಕೆ ಸಚಿವ ನಾರಾಯಣಗೌಡ

ಮೈಸೂರು:ಮಂಡ್ಯದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದು ತಪ್ಪು, ಸಮುದಾಯ ಭವನ ಯಾರಪ್ಪನ ಮನೆ ಸ್ವತ್ತಲ್ಲ ಎಂದು ಎಂಎಲ್​​ಸಿ ಕೆ.ಟಿ. ಶ್ರೀಕಂಠೇಗೌಡರ ವಿರುದ್ಧ ತೋಟಗಾರಿಕೆ ಸಚಿವ ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ.

ಆಶಾ ಕಾರ್ಯಕರ್ತೆ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮದವರು ಕೂಡ ನಿರಂತರವಾಗಿ ಕೆಲಸ ಮಾಡ್ತಿದ್ದಾರೆ. ಶ್ರೀಕಂಠೇಗೌಡ ಅವರದ್ದು ಆಡಂಬರ ಹಾಗು ಪ್ರಚಾರದ ಬದುಕು. ಅವರಿಗೆ ಇಷ್ಟು ದಿನ ಪ್ರಚಾರ ಸಿಕ್ಕಿಲ್ಲ. ಅದಕ್ಕೆ ಈ ರೀತಿಯಾದ್ರೂ ಪ್ರಚಾರ ಪಡೆದುಕೊಳ್ಳೋಣ ಅಂತಾ ರಾಜಕಾರಣ ಮಾಡ್ತಿದ್ದಾರೆ.

ಮೊದಲು ಶ್ರೀಕಂಠೇಗೌಡರು ಅವರ ಮಗನಿಗೆ ಸರಿಯಾಗಿ ಬುದ್ಧಿ ಕಲಿಸಲಿ. ಈ ರೀತಿಯ ಪ್ರಕರಣದಲ್ಲಿ ರಾಜಕಾರಣ ಮಾಡಬಾರದು. ಇಡೀ ಪ್ರಕರಣವನ್ನು ನಾನು ಖಂಡಿಸುತ್ತೇನೆ ಎಂದರು.

ABOUT THE AUTHOR

...view details