ಕರ್ನಾಟಕ

karnataka

ರಾಜಕೀಯ ವೈರತ್ವ ಮರೆತು ವೇದಿಕೆ ಹಂಚಿಕೊಂಡ ಅಶ್ವತ್ಥ್ ನಾರಾಯಣ್-ಜಿಟಿಡಿ

By

Published : Jan 25, 2021, 6:37 PM IST

ಜೆಡಿಎಸ್​ ಮುಖಂಡರಾದ ಜಿ ಟಿ ದೇವೇಗೌಡ, ಮರಿತಿಬ್ಬೇಗೌಡ ಹಾಗೂ ಬಿಜೆಪಿಯ ಅಶ್ವತ್ಥ್ ನಾರಾಯಣ್ ಕುಶಲೋಪರಿ ನೋಡಿ ವೇದಿಕೆ ಮುಂಭಾಗ ಕುಳಿತ್ತಿದ್ದ ಸಭೀಕರಿಗೆ ಅಚ್ಚರಿ ತಂದಿತು..

Ashwathth Narayan-GTD shared the platform In Mysuru program
ರಾಜಕೀಯ ವೈರತ್ವ ಮರೆತು ವೇದಿಕೆ ಹಂಚಿಕೊಂಡ ಅಶ್ವತ್ಥ್ ನಾರಾಯಣ್-ಜಿಟಿಡಿ

ಮೈಸೂರು :ರಾಜಕೀಯದಲ್ಲಿ ಯಾರು ಮಿತ್ರರೂ ಅಲ್ಲ, ಶತ್ರುವೂ ಅಲ್ಲ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಕಿತ್ತಾಟ ಮಾಡುತ್ತಾರೆ. ಆದರೆ, ನಂತರ ಒಂದೇ ವೇದಿಕೆ ಮೇಲೆ ಕುಳಿತು ಕುಶಲೋಪರಿ ವಿಚಾರಿಸಿಕೊಳ್ಳುತ್ತಾರೆ ಎಂಬುದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಭಾಗಿಯಾಗಿದ್ದ ಕಾರ್ಯಕ್ರಮವೇ ಸಾಕ್ಷಿಯಾಗಿದೆ.

ಒಂದೇ ವೇದಿಕೆಯಲ್ಲಿ ಜಿಟಿ ದೇವೇಗೌಡ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ್​

ಮೈಸೂರಿನ ಬೋಗಾದಿಯ ಎರಡನೇ ಹಂತದಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ್​​ ನಾರಾಯಣ್, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ವೇದಿಕೆ ಹಂಚಿಕೊಂಡಿದ್ದರು.

ಈ ವೇಳೆ ಒಬ್ಬರನೊಬ್ಬರು ಕುರಿತು ಕುಶಲೋಪರಿ ವಿಚಾರಿಸಿಕೊಳ್ಳುತ್ತಿರುವುದು ಕಂಡು ಬಂತು. ಜೆಡಿಎಸ್​ ಮುಖಂಡರಾದ ಜಿ ಟಿ ದೇವೇಗೌಡ, ಮರಿತಿಬ್ಬೇಗೌಡ ಹಾಗೂ ಬಿಜೆಪಿಯ ಅಶ್ವತ್ಥ್ ನಾರಾಯಣ್ ಕುಶಲೋಪರಿ ನೋಡಿ ವೇದಿಕೆ ಮುಂಭಾಗ ಕುಳಿತ್ತಿದ್ದ ಸಭೀಕರಿಗೆ ಅಚ್ಚರಿ ತಂದಿತು.

ಇದನ್ನೂ ಓದಿ:ಮೂವರಿಗೆ ಖಾತೆ ಮರು ಹಂಚಿಕೆ.. ವೈದ್ಯಕೀಯ ಶಿಕ್ಷಣ ಖಾತೆ ಮರಳಿ ಪಡೆದ ಡಾ. ಸುಧಾಕರ್

ABOUT THE AUTHOR

...view details