ಕರ್ನಾಟಕ

karnataka

ಬಾನಂಗಳದಲ್ಲಿ ಹಾರಾಡಿದ ತ್ರಿವರ್ಣ ಧ್ವಜ... ಮೈಸೂರಿನಲ್ಲಿ 'ಏರ್​​ ಶೋ' ಸಂಭ್ರಮ

By

Published : Oct 2, 2019, 5:22 PM IST

ಜಿಲ್ಲಾಡಳಿತದ ದಸರಾ ಸಮಿತಿಯಿಂದ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ‘ಏರ್ ಶೋ’ ನಡೆಯಿತು.

ಮೈಸೂರಿನಲ್ಲಿ ‘ಏರ್ ಶೋ’ ಸಂಭ್ರಮ

ಮೈಸೂರು: ಜಿಲ್ಲಾಡಳಿತದ ದಸರಾ ಸಮಿತಿಯಿಂದ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ‘ಏರ್ ಶೋ’ ನಡೆಯಿತು. ಆರಂಭದಲ್ಲಿ ಪಂಜಿನ ಕವಾಯತು ಮೈದಾನದ ಎಡಭಾಗದಿಂದ ಬಂದ ವಿಮಾನ, ಜನರ ಮೇಲೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿತು. 8 ಸಾವಿರ ಅಡಿಗಳಿಂದ ಪ್ಯಾರಾಚೂಟ್​ ಮುಲಕ ತ್ರಿವರ್ಣ ಧ್ವಜ ಸೃಷ್ಟಿಸಿದ ದೃಶ್ಯ ನೋಡುಗರ ಮನ ಸೆಳೆಯಿತು.

ಮೈಸೂರಿನಲ್ಲಿ ‘ಏರ್ ಶೋ’ ಸಂಭ್ರಮ

ಈ ವೇಳೆ ಮಾತನಾಡಿದ ವಿಂಗ್ ಕಮಾಂಡರ್ ಬಾಳಗ, ನಾನು ಉಡುಪಿ ಜಿಲ್ಲೆ ಪುತ್ತೂರಿನವನು. 16 ವರ್ಷಗಳಿಂದ ಏರ್ ಶೋನಲ್ಲಿ ಭಾಗವಹಿಸುತ್ತಿದ್ದೇನೆ. ದೇಶ ಸೇವೆ ಮಾಡುವ ಯೋಧರ ಬಗ್ಗೆ ಸಾರ್ವಜನಿಕರು ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು.

ABOUT THE AUTHOR

...view details