ಕರ್ನಾಟಕ

karnataka

ETV Bharat / state

Live Video: ಜ್ಯುವೆಲ್ಲರಿ ಅಂಗಡಿಯೊಳಗೆ ಏಕಾಏಕಿ ನುಗ್ಗಿದರು.. ಮಾಲೀಕನನ್ನ ಥಳಿಸಿ ಸಿಕ್ಕಂಗೇ ದೋಚಿರುವ ವಿಡಿಯೋ..

ದರೋಡೆ ಮಾಡುವಾಗ ಅಡ್ಡಬಂದ ಡದಹಳ್ಳಿ ಗ್ರಾಮದ ನಿವಾಸಿ ಚಂದ್ರು ಎಂಬಾತನ ತಲೆಗೆ ಗುಂಡು ಹಾರಿಸಿದ್ದರು. ಬಳಿಕ ಬ್ಯಾಗ್​ನಲ್ಲಿ ಚಿನ್ನಾಭರಣ ತುಂಬಿಕೊಂಡು ಅಲ್ಲಿಂದ ಪರಾರಿಯಾಗಿದ್ದರು..

By

Published : Aug 24, 2021, 7:46 PM IST

Updated : Aug 24, 2021, 8:05 PM IST

mysore-robbery-case
ಚಿನ್ನದಂಗಡಿ ದರೋಡೆಕೋರರು

ಮೈಸೂರು :ಚಿನ್ನಾಭರಣ ದೋಚಿ ಅಂಗಡಿ ಮಾಲೀಕನಿಗೆ ಹಲ್ಲೆ ನಡೆಸಿದ ವಿಡಿಯೋವೊಂದು 'ಈಟಿವಿ ಭಾರತ್​'ಗೆ ಲಭ್ಯವಾಗಿದೆ.

ಜ್ಯುವೆಲ್ಲರಿ ಅಂಗಡಿ ಮಾಲೀಕನಿಗೆ ಹಲ್ಲೆ ನಡೆಸಿರುವ ದೃಶ್ಯ

ವಿದ್ಯಾರಣ್ಯಪುರಂನ ಪ್ರಮುಖ ರಸ್ತೆಯಲ್ಲಿರುವ ಅಮೃತ ಗೋಲ್ಡ್ ಆ್ಯಂಡ್ ಸಿಲ್ವರ್ ಚಿನ್ನಾಭರಣ ಅಂಗಡಿಗೆ ಬಂದ ನಾಲ್ವರು ದರೋಡೆಕೋರರು ಎಂಟ್ರಿ ಕೊಡ್ತಾರೆ. ಮಾಲೀಕ ಧರ್ಮೇಂದ್ರ ಎಂಬುವರನ್ನು ಮೂವರು ಸೇರಿ ಥಳಿಸಿದರೆ, ಮತ್ತೊಬ್ಬ ಚಿನ್ನಾಭರಣ ತುಂಬಿಕೊಂಡು ಪರಾರಿಯಾಗುವ ದೃಶ್ಯ ಅಂಗಡಿಯಲ್ಲಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಚಿನ್ನದಂಗಡಿ ದರೋಡೆಕೋರರು

ನಂತರ ಬಾಗಿಲು ತೆಗೆದು ಓಡಿ ಹೋಗುವ ದುಷ್ಕರ್ಮಿಗಳು, ಈ ವೇಳೆ‌ ಅಡ್ಡ ಬಂದ ಮಾಲೀಕರ ಸಂಬಂಧಿ ಮೇಲೆ ಫೈರ್ ಮಾಡಿದ್ದಾರೆ. ಈ ವೇಳೆ ಕಿವಿ ಓಲೆ ಖರೀದಿಸಲು ಬಂದಿದ್ದ ದಡದಹಳ್ಳಿ ಚಂದ್ರುಗೆ ಗುಂಡು ತಗುಲಿದೆ. ಪರಿಣಾಮ ಅವರು ಮೃತಪಟ್ಟಿದ್ದಾರೆ.

ಚಿನ್ನದಂಗಡಿ ದರೋಡೆಕೋರರು

ಓದಿ:ಚಿನ್ನದಂಗಡಿ ದರೋಡೆ, ಹತ್ಯೆ ಪ್ರಕರಣ : ಆರೋಪಿಗಳು ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯ ಸೆರೆ

Last Updated : Aug 24, 2021, 8:05 PM IST

ABOUT THE AUTHOR

...view details