ಕರ್ನಾಟಕ

karnataka

By

Published : Aug 1, 2022, 4:22 PM IST

ETV Bharat / state

ಕುದಿಯುತ್ತಿದ್ದ ಬಿಸಿ ನೀರಿನ ಪಾತ್ರೆಗೆ ಬಿದ್ದಿದ್ದ ಮಗು ಸಾವು.. ಮೈಸೂರಿನಲ್ಲಿ ದುರಂತ

ಕುದಿಯುತ್ತಿದ್ದ ಬಿಸಿ ನೀರಿನ ಪಾತ್ರೆಗೆ ಬಿದ್ದಿದ್ದ ಮಗು- ಚಿಕಿತ್ಸೆ ಫಲಿಸದೇ ಪ್ರಕೃತಿ ಎಂಬ ಎರಡು ವರ್ಷದ ಬಾಲಕಿ ಸಾವು- ಮೈಸೂರಿನಲ್ಲಿ ಪ್ರಕರಣ

ಮೈಸೂರು
ಮೈಸೂರು

ಮೈಸೂರು:ಕುದಿಯುತ್ತಿದ್ದ ಬಿಸಿ ನೀರಿನ ಪಾತ್ರೆಗೆ ಆಕಸ್ಮಿಕವಾಗಿ ಎರಡು ವರ್ಷದ ಮಗು ಬಿದ್ದ ಪರಿಣಾಮ, ಮೃತಪಟ್ಟಿರುವ ಘಟನೆ ಮೈಸೂರು ತಾಲೂಕಿನ ಮಾರ್ಬಳ್ಳಿ ಹುಂಡಿ ಗ್ರಾಮದಲ್ಲಿ ನಡೆದಿದೆ. ಪ್ರಕೃತಿ (2) ಮೃತ ಬಾಲಕಿ.

ಜುಲೈ 15 ರಂದು ನಿರ್ಮಾಣ ಹಂತದಲ್ಲಿರುವ ಪಕ್ಕದ ಮನೆಯ ಕೂಲಿ ಕಾರ್ಮಿಕರಿಗಾಗಿ ಅಡುಗೆ ಮಾಡಲಾಗುತ್ತಿತ್ತು. ಈ ವೇಳೆ ಸನಿಹದಲ್ಲೇ ಆಟವಾಡುತ್ತಿದ್ದ ಪ್ರಕೃತಿ ಕುದಿಯುತ್ತಿದ್ದ ಬಿಸಿ ನೀರಿನ ಪಾತ್ರೆಯೊಳಗೆ ಬಿದ್ದಿದ್ದಳು. ಕೂಡಲೇ ಮಗುವನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಪ್ರಕೃತಿ ಮೃತಪಟ್ಟಿದ್ದಾಳೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮೈಸೂರಲ್ಲಿ ದನಗಾಹಿ ಮೇಲೆ ಹುಲಿ ದಾಳಿ.. ವ್ಯಕ್ತಿ, ಜಾನುವಾರು ಕೊಂದುಹಾಕಿದ ಟೈಗರ್​

ABOUT THE AUTHOR

...view details