ಮೈಸೂರು: ಇಂದಿನಿಂದ ಜಗತ್ಪ್ರಸಿದ್ಧ ಮೈಸೂರು ಅರಮನೆಯಲ್ಲಿ ರಾಜಪರಂಪರೆಯ ನವರಾತ್ರಿ ಉತ್ಸವಕ್ಕೆ ಚಾಲನೆ ದೊರಕಿದೆ. ರಾಜಪೋಷಾಕಿನಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಗಾಂಭೀರ್ಯದಿಂದಲೇ ಕಂಗೊಳಿಸುತ್ತಿದ್ದಾರೆ.
ನವರಾತ್ರಿ ಉತ್ಸವಕ್ಕೆ ಅದ್ಧೂರಿ ಚಾಲನೆ.. ರಾಜಪೋಷಾಕಿನಲ್ಲಿ ಯದುವೀರ ರಾಜಗಾಂಭೀರ್ಯ.. ಇಷ್ಟೊಂದ್ ಸುಂದರ ಮೈಸೂರು ದಸರಾ.. - dasara update
ನಾಡಹಬ್ಬ ದಸರಾಗೆ ಮೈಸೂರಿನ ಅರಮನೆಯಲ್ಲಿ ರಾಜಕುಮಾರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದ್ದಾರೆ.
![ನವರಾತ್ರಿ ಉತ್ಸವಕ್ಕೆ ಅದ್ಧೂರಿ ಚಾಲನೆ.. ರಾಜಪೋಷಾಕಿನಲ್ಲಿ ಯದುವೀರ ರಾಜಗಾಂಭೀರ್ಯ.. ಇಷ್ಟೊಂದ್ ಸುಂದರ ಮೈಸೂರು ದಸರಾ..](https://etvbharatimages.akamaized.net/etvbharat/prod-images/768-512-4588436-thumbnail-3x2-mys.jpg)
ಬೆಳಗ್ಗೆ 5:10 ರಿಂದ 5:30ರ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖವಾಡ ಜೋಡಣೆ ಮಾಡಲಾಯಿತು. ಬೆಳಗ್ಗೆ 8:05 ರಿಂದ 8:55ರ ಶುಭ ಸಮಯದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಕಂಕಣಧಾರಣೆ ಆಗಿದೆ. ಅರಮನೆ ಒಳ ಆವರಣದ ಚಾಮುಂಡಿ ತೊಟ್ಟಿಯಲ್ಲಿ ಕಂಕಣಧಾರಣೆ, ನಂತರ ವಾಣಿವಿಲಾಸ ದೇವರಮನೆಯಲ್ಲಿ ಕಂಕಣಧಾರಣೆಯನ್ನು ಮಾಡಲಾಗಿದೆ.
ಅರಮನೆಯ ಸವಾರಿ ತೊಟ್ಟಿಗೆ ಬೆಳಗ್ಗೆ 9:30ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನ ಆಗಮನವಾಗಿದ್ದು, ಬೆಳಗ್ಗೆ 9:50 ರಿಂದ 10:35ರವರೆಗೆ ಕಳಸ ಪೂಜೆಯ ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಐದನೇ ಬಾರಿ ಸಿಂಹಾಸನರೋಹಣ ಮಾಡಿದ್ದಾರೆ.ಖಾಸಗಿ ದರ್ಬಾರ್ ನಂತರ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಚಾಮುಂಡೇಶ್ವರಿ ಮೂರ್ತಿಯನ್ನು ತರಲಾಗುವುದು. ಈ ಮೂಲಕ ಮೊದಲ ದಿನದ ಅರಮನೆ ಕಾರ್ಯಕ್ರಮ ಮುಕ್ತಾಯವಾಗಲಿದೆ.